ಮದರ್ ತೆರೇಸಾ ಚಾರಿಟಿಗೆ ಧನ ಸಹಾಯ ನೀಡಿದ ಟಿ20 ವಿಶ್ವಕಪ್ ವಿಜೇತ ವಿಂಡೀಸ್

ಐಸಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ನಂತರ ವೆಸ್ಟ್ ಇಂಡೀಸ್‌ನ ಟೀಂ ಮ್ಯಾನೇಜರ್ ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವ...
ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವುದು
ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವುದು
ಕೊಲ್ಕತ್ತಾ: ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡ ಕೊಲ್ಕತ್ತಾದಲ್ಲಿರುವ ಮದರ್ ತೆರೇಸಾರ ಚಾರಿಟಿಗೆ ಧನ ಸಹಾಯ ನೀಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ನಂತರ ವೆಸ್ಟ್ ಇಂಡೀಸ್‌ನ ಟೀಂ ಮ್ಯಾನೇಜರ್ ರಾವಲ್ ಲೂಯಿಸ್ ಚಾರಿಟಿಗೆ ಧನ ಸಹಾಯ ನೀಡುತ್ತಿರುವ ಚಿತ್ರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.
ತಮ್ಮ ಜೆರ್ಸಿ ಖರೀದಿಸಲೂ ದುಡ್ಡು ಇಲ್ಲದೆ ಇದ್ದು, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಿಂದಲೇ ನಿರ್ಲಕ್ಷ್ಯಕ್ಕೊಳಗಾದ ವೆಸ್ಟ್ ಇಂಡೀಸ್ ತಂಡ, ವಿಶ್ವಕಪ್ ಮುಡಿಗೇರಿಸಿರುವುದರ ಜತೆಗೆ ಚಾರಿಟಿಗೆ ಧನ ಸಹಾಯ ಮಾಡುವ ಮೂಲಕ ನಿಜವಾದ ಚಾಂಪಿಯನ್‌ಗಳಾಗಿದ್ದಾರೆ ಎಂದು ಜನರು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com