ಹುಬ್ಬಳ್ಳಿ: ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್) ಟಿ20 ಟೂರ್ನಿಯ ವೇಳೆ ಬೆಟ್ಟಿಂಗ್ ದಂಧೆ ನಡೆಸಿದ ಆರೋಪದ ಮೇಲೆ ಹರಿಯಾಣ ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಂಗಳೂರು ಯುನೈಟೆಡ್-ನಮ್ಮ ಶಿವಮೊಗ್ಗ ನಡುವಿನ ಪಂದ್ಯದ ವೇಳೆ ಮೈದಾನದ ವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ವಿಕಾಸ್ ವರ್ಮಾ, ಸಂಜಯ್ ಕುಮಾರ್ ಆರೋರ, ಪಂಕಜ್ ಕುಮಾರ್, ದಿವಾಕರ್ ಎಂಬುವರು ಬೆಟ್ಟಿಂಗ್ ಆಡುತ್ತಿದ್ದು ಅವರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 4 ಮೊಬೈಲ್, 24.500 ರುಪಾಯಿ ವಶಪಡಿಸಿಕೊಂಡಿದ್ದಾರೆ.
ಕೆಪಿಎಲ್ 5ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಉಭಯ ತಂಡಗಳು ಸೆಣಸುತ್ತಿದ್ದು ನಮ್ಮ ಶಿವಮೊಗ್ಗ ತಂಡ 7 ವಿಕೆಟ್ ಗಳಿಂದ ಮಂಗಳೂರು ಯುನೈಟೆಡ್ ತಂಡವನ್ನು ಮಣಿಸಿದೆ.
Advertisement