ಉನಾದ್ಕತ್ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪಡೆದಿದ್ದರು. ನಂತರ ರೋಹಿತ್ ಶರ್ಮಾ ಸಿಕ್ಸರ್ ಬಾರಿಸಿದರು. ಈ ವೇಳೆ 4 ಎಸೆತದಲ್ಲಿ 11 ರನ್ ಬೇಕಿತ್ತು. ಆಗ ಉನಾದ್ಕಕ್ ಮೂರನೇ ಎಸೆತವನ್ನು ಬ್ಯಾಟ್ಸ್ ಮನ್ ರೋಹಿತ್ ರಿಂದ ಬಲು ದೂರ ಹೋಗಿದ್ದರೂ ಅಂಪೈರ್ ಎಸ್ ರವಿ ವೈಡ್ ನೀಡಲಿಲ್ಲ. ಇದರಿಂದ ಸಿಟ್ಟಾದ ರೋಹಿತ್ ಅಂಪೈರ್ ಬಳಿ ಬಂದು ಅದು ವೈಡ್ ಎಂದು ವಾದಿಸಿದರು. ಆದರೆ ಅಂಪೈರ್ ವೈಡ್ ನೀಡಲಿಲ್ಲ. ಬಳಿಕ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ ಔಟಾಗಿ ಪೆವಿಲಿಯನ್ ಸೇರಿದರು. ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಪುಣೆ 3 ರನ್ ಗಳಿಂದ ಜಯಗಳಿಸಿತ್ತು.