ಕೆಪಿಎಲ್‌ನಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ಔಟ್!

ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ನಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡವನ್ನು ಕೈಬಿಡಲಾಗಿದ್ದು ಇದಕ್ಕೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ...
ಕಿಚ್ಚ ಸುದೀಪ್
ಕಿಚ್ಚ ಸುದೀಪ್
ಬೆಂಗಳೂರು: ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ನಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡವನ್ನು ಕೈಬಿಡಲಾಗಿದ್ದು ಇದಕ್ಕೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. 
ಕೆಪಿಎಲ್ ನಿಂದ ತಮ್ಮ ತಂಡವನ್ನು ಕೈಬಿಟ್ಟಿರುವುದಕ್ಕೆ ತಂಡದ ನಾಯಕ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ನಾಯಕನಾದ ನನಗೆ ಒಂದು ಮಾತನ್ನಾದರೂ ತಿಳಿಸಬೇಕಿತ್ತು. ದಿಢೀರ್ ಅಂತ ತಂಡವನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. 
ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಗೂಗಲ್ ಪ್ಲಸ್ ಅಕೌಂಟ್ ನಲ್ಲಿ ದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ. ರಾಕ್ ಸ್ಟಾರ್ ತಂಡದ ಜತೆಗೆ ಮಂಗಳೂರು ಯುನೈಟೆಡ್ ತಂಡ ಸಹ ಕೆಪಿಎಲ್ 6ನೇ ಆವೃತ್ತಿಯಿಂದ ದೂರ ಉಳಿಯಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com