ಅಕ್ಟೋಬರ್ 6ರಿಂದ ರಣಜಿ ಆರಂಭಗೊಳ್ಳಲಿದ್ದು 2018ರ ಮಾರ್ಚ್ 18ಕ್ಕೆ ದೇವಧಾರ್ ಟ್ರೋಫಿಯೊಂದಿಗೆ ದೇಸಿ ಋತು ಮುಕ್ತಾಯಗೊಳ್ಳಲಿದೆ. ಇನ್ನು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಭಾರತ, ಆಸ್ಟ್ರೇಲಿಯಾ ನಡುವೆ ಸೀಮಿತ ಓವರ್ ಗಳ ಸರಣಿ ನಡೆಯಲಿದ್ದು, ಭಾರತ ಎ ತಂಡ ಸಹ ಸರಣಿಯಲ್ಲಿ ಭಾಗಿಯಾಗಲಿದ್ದು ಈ ಹಿನ್ನೆಲೆಯಲ್ಲಿ ದುಲೀಪ್ ಟ್ರೋಫಿ ಕೈಬಿಡಲು ಬಿಸಿಸಿಐ ತೀರ್ಮಾನಿಸಿದೆ.