ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಸಲಹೆಗಾರರಾಗಿ ಟೀಂ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಆಯ್ಕೆಯಾಗಲಿದ್ದಾರೆ.
ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಶಿಶ್ ನೆಹ್ರಾ ವಿದಾಯ ಹೇಳಿದ್ದರು. ಐಪಿಎಲ್ ನಲ್ಲಿ ನೆಹ್ರಾ ಆಡುವುದಿಲ್ಲ ಎನ್ನುವುದು ಖಚಿತಗೊಂಡಿದೆ. ಆದರೆ ನೆಹ್ರಾ ತೆರೆಯ ಹಿಂದೆ ಈ ಸಲ ಆಡಲಿದ್ದಾರೆ. ಅದು ತಂಡವೊಂದರ ಸಲಹೆಗಾರರಾಗಿ ಎನ್ನುವುದು ವಿಶೇಷ.
ಸ್ವತಃ ಅವರ ಆಪ್ತ ವಲಯದ ಮೂಲಗಳು ಈ ವಿಷಯವನ್ನು ಖಚಿತಪಡಿಸಿದೆ. ಆಶಿಶ್ ನೆಹ್ರಾ ತಂಡಕ್ಕೆ ಸಲಹೆಗಾರರಾಗಿ ಆಗಮಿಸುತ್ತಿರುವುದರ ಹಿಂದೆ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೃಪಾಕಟಾಕ್ಷ ಇದೆ ಎನ್ನುವ ಮಾತುಗಳು ಕೂಡ ಹೇಳಿ ಬರುತ್ತಿದೆ.