"ಬೌಲರ್ ಗಳಿಗೆ ಶ್ರೇಯಸ್ಸು ಸಲ್ಲಬೇಕು, ಇಂತಹ ಪಿಚ್ ಮೇಲೆ ಈ ಫಲಿತಾಂಶಕ್ಕೆ ಕಾರಣಕರ್ತರು ಅವರೇ. ಬ್ಯಾಟಿಂಗ್ ಮಾಡಲು ಈ ವಿಕೆಟ್ ಪ್ರಶಸ್ತವಾಗಿತ್ತು ಮತ್ತು ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವಾಗ ವಿಕೆಟ್ ಪಡೆಯಲು ನಾವು ತುಸು ಶಾಂತಿಯಿಂದ ಕಾಯಬೇಕಾಯ್ತು" ಎಂದು ಪಂದ್ಯದ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿದ ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಇಲ್ಲಿಯವರೆಗೂ ಭಾರತಕ್ಕೆ ೧೯ ಟೆಸ್ಟ್ ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ.