ಇಂಗ್ಲೆಂಡ್ ತಂಡ ನೀಡಿದ್ದ 322 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ವಿರಾಟ್ ಕೋಹ್ಲಿ-ಯುವರಾಜ್ ಸಿಂಗ್ ಆಟದ ಮೇಲೆ ಭರವಸೆ ಮೂಡಿತ್ತಾದರೂ, ಕೇವಲ 102 ರನ್ ಗಳನ್ನು ಕಲೆ ಹಾಕಿದ್ದ ಭಾರತ 19 ನೇ ಓವರ್ ನಲ್ಲಿ ವಿರಾಟ್ ಕೋಹ್ಲಿ ವಿಕೆಟ್(52), 25 ನೇ ಓವರ್ ನಲ್ಲಿ ಯುವರಾಜ್ ಸಿಂಗ್ (45) ವಿಕೆಟ್ ಕಳೆದುಕೊಂಡು ಮತ್ತೆ ಅಘಾತ ಎದುರಿಸಿತು. ನಂತರ ಬಂದ ಕೇದಾರ್ ಜಾಧವ್- ಹಾರ್ದಿ ಪಾಂಡ್ಯ ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ 100 ಕ್ಕೂ ರನ್ ಗಳ ಮೊತ್ತವನ್ನು ಕಲೆಹಾಕಿದರು. ಆದರೆ ಹಾರ್ದಿಕ್ ಪಾಂಡ್ಯ 56 ರನ್ ಗಳಿಸುತ್ತಿದ್ದಂತೆಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. ನಂತರ ಏಕಾಂಗಿ ಹೋರಾಟ ನಡೆಸಿದ ಕೇದಾರ್ ಜಾಧವ್ ಅಂತಿಮ ಓವರ್ ನಲ್ಲಿ 1 ಎಸೆತ ಬಾಕಿ ಇರುವಂತೆ ವಿಕೆಟ್ ಒಪ್ಪಿಸಿದರು. ಕೊನೆಯ ಎರಡು ಎಸೆತಗಳಲ್ಲಿ 6 ರನ್ ಕಲೆ ಹಾಕಬೇಕಿದ್ದ ಭಾರತದ ಬ್ಯಾಟ್ಸ್ ಮನ್ ಗಳಾದ ಭುವನೇಶ್ವರ್ ಕುಮಾರ್, ಬೂಮ್ರಾ ಅವರನ್ನು ರನ್ ಕದಿಯದಂತೆ ಕಟ್ಟಿದ ಇಂಗ್ಲೆಂಡ್ ಜಯ ಗಳಿಸಿತು.