ಡೆಕನ್ ಕ್ರಾನಿಕಲ್ ವರದಿಯ ಪ್ರಕಾರ, ವಿರೇಂದ್ರ ಸೆಹ್ವಾಗ್ ಅವರು ಟ್ವಿಟರ್ ನಲ್ಲಿ ನೇರಾನೇರವಾಗಿ ಮಾತನಾಡುತ್ತಾರೆ, ಆದ್ದರಿಂದ ಅವರನ್ನು ಕೋಚ್ ಆಗಿ ನೇಮಕ ಮಾಡುವುದಕ್ಕೆ ಬಿಸಿಸಿಐ ಹಿಂದೇಟು ಹಾಕುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿರುವ ಕ್ರಾನಿಕಲ್ ವರದಿ, ಒಂದು ವೇಳೆ ಸೆಹ್ವಾಗ್ ಅವರನ್ನು ಕೋಚ್ ಆಗಿ ನೇಮಿಸಿದರೆ ಟ್ವಿಟರ್ ನಲ್ಲಿ ನೇರಾ ನೇರವಾಗಿ ಮಾತನಾಡದಂತೆ ಷರತ್ತು ವಿಧಿಸಬಹುದು, ಆದರೆ ಒಂದು ವೇಳೆ ಭಾರತ ಪಂದ್ಯವನ್ನೋ, ಸರಣಿಯನ್ನೋ ಸೋತರೆ ಸೆಹ್ವಾಗ್ ಅವರು "ಸೋ ವಾಟ್ (so what) ಎಂದು ಪ್ರಶ್ನಿಸಿದರೆ ಮುಜುಗರ ಎದುರಿಸಬೇಕಾಗುತ್ತದೆ ಎಂಬುದು ಬಿಸಿಸಿಐ ನ ಆತಂಕವಾಗಿದೆ ಎಂದು ಹೇಳಿದೆ.