ಮೂರನೇ ದಿನದಾಟದಲ್ಲಿ ರುಣ್ನಾಯರ್ (116 ರನ್,13 ಬೌಂಡರಿ), ಕೆ.ಗೌತಮ್ (11 ರನ್) ಗಳಿಸಿ ವಿಕೆಟ್ ಒಪ್ಪಿಸಿದ್ದರೆ ಮಯಾಂಕ್ ಅಜೇಯರಾಗಿ ಉಳಿದರು. ಇವರು 494 ಬಾಲ್ ಗಳಲ್ಲಿ ಅಜೇಯವಾಗಿ 304 ರನ್ ಗಳಿಸಿದರು. ಇದರಲ್ಲಿ 28 ಬೌಂಡರಿ ಮತ್ತು 4 ಸಿಕ್ಸರ್ ಸೇರಿದೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಭಾರಿಸಿದ ಕರ್ನಾಟಕದ ಮೂರನೇ ಮತ್ತು ಭಾರತದ 43 ನೇ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಮಯಾಂಕ್ ಪಾತ್ರರಾದರು.