2 ನೇ ಟಿ20 ಪಂದ್ಯದ ಸೋಲಿನ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ವಿವಿಎಸ್ ಲಕ್ಷ್ಮಣ್ ಟಿ20ಯಲ್ಲಿ ಯುವಕರಿಗೆ ಅವಕಾಶ ನೀಡಬೇಕು ಎಂದಿದ್ದರೆ, ಟೀಂ ಮ್ಯಾನೇಜ್ಮೆಂಟ್, ಮಾಜಿ ನಾಯಕ ತಂಡದಲ್ಲಿ ತನ್ನ ಪಾತ್ರವನ್ನು ಅರಿಯುವಂತೆ ಮಾಡಬೇಕು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಜನರು ಧೋನಿಯವರತ್ತ ಏಕೆ ಬೆರಳು ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನು 3 ಬಾರಿ ಬ್ಯಾಟಿಂಗ್ ವೈಫಲ್ಯ ಎದುರಿಸಿದರೂ ನನ್ನತ್ತ ಯಾರೂ ಬೆರಳು ತೋರುವುದಿಲ್ಲ, ಏಕೆಂದರೆ ನನಗಿನ್ನೂ 35 ಆಗಿಲ್ಲ ಎಂದು ವಿರಾಟ್ ವ್ಯಂಗ್ಯವಾಗಿ ಧೋನಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.