ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯದ ಸುಳಿವು ನೀಡಿದ ಲಸಿತ್ ಮಲಿಂಗಾ

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಕಳಪೆ ಪ್ರದರ್ಶನ ನೀಡಿದ್ದರಿಂದ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸುಳಿವು ನೀಡಿದ್ದಾರೆ...
ಲಸಿತ್ ಮಲಿಂಗಾ
ಲಸಿತ್ ಮಲಿಂಗಾ
Updated on
ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಕಳಪೆ ಪ್ರದರ್ಶನ ನೀಡಿದ್ದರಿಂದ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸುಳಿವು ನೀಡಿದ್ದಾರೆ. 
ಕಾಲಿನ ಗಾಯದ ಸಮಸ್ಯೆಯಿಂದ 19 ತಿಂಗಳ ನಂತರ ತಂಡಕ್ಕೆ ಮರಳಿದ್ದ ಲಸಿತ್ ಮಲಿಂಗಾ ಭಾರತ ವಿರುದ್ಧದ 4 ಏಕದಿನ ಪಂದ್ಯಗಳ ಪೈಕಿ ಬರೀ ಎರಡು ವಿಕೆಟ್ ಮಾತ್ರ ಪಡೆಯಲು ಸಫಲರಾಗಿದ್ದು ತಂಡದಲ್ಲಿ ಅವರ ಪಾತ್ರದ ಕುರಿತು ಪ್ರಶ್ನೆಗಳು ಎದ್ದಿವೆ. ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಸ್ವತಃ ಮಲಿಂಗಾ ಅವರೇ ಹಿಂದಿನ ಜಿಂಬಾಬ್ವೆ ಮತ್ತು ಭಾರತ ವಿರುದ್ಧದ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಕುರಿತು ನೋವು ವ್ಯಕ್ತಪಡಿಸಿದ್ದಾರೆ. 
ಗಾಯ ಸಮಸ್ಯೆಯಿಂದಾಗಿ ನಾನು 19 ತಿಂಗಳ ನಂತರ ತಂಡಕ್ಕೆ ಮರಳಿದ್ದೇನೆ. ಆದರೆ ಎರಡು ತಂಡಗಳ ವಿರುದ್ಧ ನಾನು ಉತ್ತಮ ಪ್ರದರ್ಶನ ನೀಡಲಿಲ್ಲ. ನಾನು ಈ ಸರಣಿಯ ನಂತರ ಎಲ್ಲಿದ್ದೇನೆಂದು ನೋಡುತ್ತೇನೆ. ಜತೆಗೆ ನನ್ನ ದೇಹವು ಎಷ್ಟು ಸಮಯದವರೆಗೆ ನನಗೆ ಆಡಲು ಸಹಕರಿಸುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಿ ನೋಡುತ್ತೇನೆ ಎಂದು ಹೇಳಿದ್ದಾರೆ. 
ನಾನು ಅನುಭವಿ ಆಟಗಾರ ಎಂಬುದು ಇಲ್ಲಿ ಮುಖ್ಯವಲ್ಲ, ತಂಡಕ್ಕಾಗಿ ನಾನು ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ತಂಡದಲ್ಲಿ ನನ್ನ ಅಗತ್ಯವೆನಿದೆ. ಮುಂದೆ ನನಗೆ ಎಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತದೆ ನೋಡುತ್ತೇನೆ. ಆ ಪಂದ್ಯಗಳಲ್ಲಿ ನನ್ನ ಶರೀರ ನನಗೆ ಎಷ್ಟು ಸಹಕರಿಸುತ್ತದೆ ಎಂದು ಪರೀಕ್ಷಿಸುತ್ತೇನೆ. ಒಂದು ವೇಳೆ ನಾನು ದಣಿದಿದ್ದೇನೆ ಎಂಬುದು ಮನದಟ್ಟಾದರೆ, ಖುಷಿಯಾಗಿ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುತ್ತೇನೆ ಎಂದು ಲಸಿತ್ ಮಲಿಂಗಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com