ಭಾರತ ತಂಡದ ಅಭಿಮಾನಿಯಿಂದ ಜನಾಂಗೀಯ ನಿಂದನೆ: ಇಮ್ರಾನ್ ತಾಹಿರ್ ಆರೋಪ

ಭಾರತ-ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಅಭಿಮಾನಿಯೊಬ್ಬರಿಂದ ಜನಾಂಗೀಯ ನಿಂದನೆಗೆ
ಇಮ್ರಾನ್  ತಾಹಿರ್
ಇಮ್ರಾನ್ ತಾಹಿರ್
Updated on

ಭಾರತ-ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು,  ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಅಭಿಮಾನಿಯೊಬ್ಬರಿಂದ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಾಗಿ ದಕ್ಷಿಣ ಆಫ್ರಿಕಾದ ಆಟಗಾರ ಇಮ್ರಾನ್ ತಾಹಿರ್ ಆರೋಪಿಸಿದ್ದಾರೆ.
    
ಫೆ.10 ರಂದು ನಡೆದ ಪಂದ್ಯದಲ್ಲಿ ಇಮ್ರಾನ್ ತಾಹಿರ್ ಭಾಗಿಯಾಗಿರಲಿಲ್ಲ. ಈ ವೇಳೆ ತಂಡದ 12 ನೇ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಇಮ್ರಾನ್ ತಾಹಿರ್ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್  ಮೊಹಮ್ಮದ್ ಮೂಸಜೀ ಹೇಳಿದ್ದಾರೆ.

ಇಮ್ರಾನ್ ಹೇಳಿದ ಪ್ರಕಾರ ಜನಾಂಗೀಯ ನಿಂದನೆ  ಮಾಡಿದವರು ಭಾರತೀಯ ಕ್ರಿಕೆಟ್ ತಂಡದ  ಅಭಿಮಾನಿ ಎಂದು ತಿಳಿದುಬಂದಿದೆ. ಎಂದು ಮೂಸಜೀ ಹೇಳಿದ್ದಾರೆ. ಕ್ರೀಡಾಂಗಣ ಹಾಗು ಆಟಗಾರರ ಡ್ರೆಸ್ಸಿಂಗ್ ರೂಮ್ ನಡುವೆ ಓಡಾಡುತ್ತಿದ್ದಾಗ   ಈ ಘಟನೆ  ನಡೆದಿದ್ದು, ಇಬ್ಬರ ನಡುವೆಯೂ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com