ಏಕದಿನ ಪಂದ್ಯದಲ್ಲಿ ಎರಡು ಚೆಂಡು: ಸಚಿನ್ ತೆಂಡೂಲ್ಕರ್ ಅಭಿಪ್ರಾಯವೇನು ಗೊತ್ತೇ?

ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 50 ಓವರ್ ಗಳಿಗೆ ಎರಡು ಚೆಂಡು ಬದಲಾಯಿಸುವ ಪ್ರಸ್ತಾವನೆ ಬಗ್ಗೆ ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು, ಏಕದಿನ ಪಂದ್ಯದಲ್ಲಿ ಎರಡು ಚೆಂಡು...
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
Updated on
ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 50 ಓವರ್ ಗಳಿಗೆ ಎರಡು ಚೆಂಡು ಬದಲಾಯಿಸುವ ಪ್ರಸ್ತಾವನೆ ಬಗ್ಗೆ ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು, ಏಕದಿನ ಪಂದ್ಯದಲ್ಲಿ ಎರಡು ಚೆಂಡು ಬಳಕೆ ಮಾಡುವುದು ಕ್ರಿಕೆಟ್ ಕ್ರೀಡೆಗೆ ಹಾನಿಕಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಎರಡು ಚೆಂಡುಗಳನ್ನು ಬಳಕೆ ಮಾಡುವುದರಿಂದ ರಿವರ್ಸ್ ಸ್ವಿಂಗ್ ಮಾಡುವುದಕ್ಕೆ ಹೆಚ್ಚಿನ ಸಮಯ ಸಿಗುವುದಿಲ್ಲ, ಎರಡೂ ತಂಡಗಳಿಗೆ ಬ್ಯಾಟಿಂಗ್ ಮಾಡುವಾಗ ಹೊಸ ಚೆಂಡನ್ನು ನೀಡಿದರೆ ಕೊನೆಯ ಓವರ್ ಗಳಲ್ಲಿ ನಿರ್ದಿಷ್ಟ ತಂಡಕ್ಕೆ ಸಹಕಾರಿಯಾಗಲಿದೆ. ಇದು ಕ್ರಿಕೆಟ್ ನ ಕ್ರೀಡಾ ಮನೋಭಾವಕ್ಕೇ ಕುತ್ತಾಗಬಲ್ಲದು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 
ಐಸಿಸಿ ನಿಯಮಗಳನ್ನು ಬದಲಾವಣೆ ಮಾಡಿ ಪ್ರತಿ 25 ಓವರ್ ಗಳಿಗೆ ಚೆಂಡು ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಆದರೆ ಕ್ರಿಕೆಟ್ ದೇವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹೊಸ ಚೆಂಡನ್ನು ಬಳಕೆ ಮಾಡುವುದರಿಂದ ಕ್ರಿಕೆಟ್ ಕ್ರೀಡೆಗೆ ಹಾನಿಕಾರಕ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com