ವಿಜಯ್ ಹಜಾರೆ ಟೂರ್ನಿಗೂ ಮೊದಲೆ ತ್ರಿಕೋಶ ಟಿ20 ಸರಣಿಗೆ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಫೆಬ್ರವರಿ 20ರಂದೇ ತಂಡವನ್ನು ಆಯ್ಕೆ ಮಾಡಿದ್ದು ಫೆಬ್ರವರಿ 25ರಂದು ತಂಡವನ್ನು ಪ್ರಕಟ ಮಾಡಲಾಗಿತ್ತು. ಬಿಸಿಸಿಐ ಆಯ್ಕೆ ಸಮಿತಿ ಮುಂಚಿತವಾಗಿಯೇ ತಂಡವನ್ನು ಆಯ್ಕೆ ಮಾಡಿದ್ದರಿಂದ ಮಾಯಾಂಕ್ ಅಗರವಾಲ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.