ಲಂಡನ್ : ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಆಟಕ್ಕೆ ಭಾರತೀಯರು ಮಾತ್ರವಲ್ಲ, ಇಂಗ್ಲೆಂಡ್ ತಂಡದವರೂ ಕೂಡಾ ಪಿಧಾ ಆಗಿದ್ದಾರೆ.
ರವೀಂದ್ರ ಜಡೇಜಾ ಅಸಾಮಾನ್ಯ ಕ್ರಿಕೆಟ್ ಆಟಗಾರ . ಮೊದಲ ನಾಲ್ಕು ಮ್ಯಾಚ್ ಅವರು ಆಡದಿದ್ದು ನಮ್ಮ ಪುಣ್ಯ! ಎಂದು ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಪೌಲ್ ಫಾರ್ಬ್ರೇಸ್ ಹೊಗಳಿದ್ದಾರೆ.
8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರವೀಂದ್ರ ಜಡೇಜಾ ತನ್ನ ಒಂಬತ್ತನೇ ಟೆಸ್ಟ್ ನಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು 160-6 ರಿಂದ 292ಕ್ಕೆ ಕೊಂಡೊಯ್ದು ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು ಕಾಪಾಡಿದ್ದರು.
ಸಂಕಷ್ಟದ ಸಂದರ್ಭದಲ್ಲಿ ಕೊನೆಯ ಪಾರ್ಟನರ್ ಶಿಫ್ ನಲ್ಲಿ ರವೀಂದ್ರ ಜಡೇಜಾ ಉತ್ತಮವಾಗಿ ಆಡಿದರು. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲವೂದರಲ್ಲಿಯೂ ಅವರೊಬ್ಬ ಅಸಾಮಾನ್ಯ , ಅಪಾಯಕಾರಿ ಆಟಗಾರ. ಕೊನೆಯ ಪಂದ್ಯದಲ್ಲಿ ಅವರ ಜವಾಬ್ದಾರಿಯುತ ಆಟ ತಮ್ಮಗೆ ಸಂತಸವನ್ನುಂಟುಮಾಡಿತು ಎಂದು ಫಾರ್ಬ್ರೇಸ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟಾರ್ ಕುಕ್ ಅವರ ವಿದಾಯದ ಶತಕ ನೋಡಲು ಇಡೀ ಜಗತ್ತೇ ಕಾಯುತ್ತಿದೆ. ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಅದು ಸಾಧ್ಯವಾಗಲಿದೆ ಎಂಬ ಭರವಸೆ ಹೊಂದಿರುವುದಾಗಿ ಫಾರ್ಬ್ರೇಸ್ ಹೇಳಿದ್ದಾರೆ.
Advertisement