ಏಷ್ಯಾಕಪ್ ಟೂರ್ನಿಯ ಲೀಗ್ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ಸೂಪರ್ 4 ಹಂತದತ್ತ ನೆಟ್ಟಿದೆ. ಆದರೆ ಈ ಹಂತದ ವೇಳಾಪಟ್ಟಿ ಕುರಿತು ಬಾಂಗ್ಲಾದೇಶ ಕಿಡಿಕಾರಿದೆ. ಹೌದು.. ಟೂರ್ನಿಯ ಸೂಪರ್ 4 ಹಂತದ ವೇಳಾಪಟ್ಟಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮುಶ್ರಫೆ ಮೋರ್ತಾಜಾ ಆಕ್ಷೇಪ ವ್ಯಕ್ತಪಡಿಸಿದ್ದು, ನಿಜಕ್ಕೂ ಅವೈಜ್ಞಾನಿಕ ವೇಳಾಪಟ್ಟಿ ಎಂದು ಕಿಡಿಕಾರಿದ್ದಾರೆ. ಭಾರತವೂ ಸೇರಿದಂತೆ ಬಾಂಗ್ಲಾದೇಶಕ್ಕೆ ಸತತ ಪಂದ್ಯಗಳ ಆಯೋಜನೆ ಮಾಡಿರುವುದಕ್ಕೆ ಮೋರ್ತಾಜಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.