ಗಿಲ್ಲೆಸ್ಪಿ ಪ್ರಕಾರ ಧೋನಿಗೆ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡುವುದು ತಿಳಿದಿದೆ. ಆದ್ದರಿಂದ ಅವರು ತಂಡಕ್ಕೆ ಈಗಲೂ ನಂಬಿಕಸ್ಥ ಬ್ಯಾಟ್ಸ್ ಎಂದು ಹೇಳಿದ್ದಾರೆ. ಧೋನಿ ಅವರ ಮ್ಯಾಚ್ ಫಿನಿಷಿಂಗ್ ಸಾಮರ್ಥ್ಯದಿಂದ ಭಾರತ ಒಂದು ದಶಕದಿಂದ ಫಲ ಪಡೆದಿದೆ. ಈಗಲೂ ಧೋನಿ ಅವರ ಸಾಮರ್ಥ್ಯದಿಂದ ಭಾರತ ಲಾಭ ಪಡೆಯುತ್ತಿದೆ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ. ಸಿಡ್ನಿ ಪಂದ್ಯದಲ್ಲೂ ಧೋನಿ ಪರಿಸ್ಥಿತಿಗೆ ತಕ್ಕಂತೆ ಆಡಿದ್ದರು, ಅವರು ಏಕೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಳಗಿನ ಕ್ರಮಾಂಕದಲ್ಲಿ ಬಂದು ಪರಿಸ್ಥಿತಿಗೆ ತಕ್ಕಂತೆ ಆಡುವುದು ಕಷ್ಟ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ.