ತೀವ್ರ ಬಿಸಿಲಿನ ತಾಪ ಎದುರಿಸುತ್ತಿರುವ ಉತ್ತರ ಭಾರತದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಗುರುಗ್ರಾಮದಲ್ಲಿಯೂ ನೀರಿಗೆ ಕೊರತೆ ಉಂಟಾಗಿದ್ದು ವಿರಾಟ್ ಕೊಹ್ಲಿ ಮನೆಯಲ್ಲಿ ಅರ್ಧ ಡಜನ್ (6 ಕಾರು) ಕಾರುಗಳನ್ನು ಸ್ವಚ್ಛಗೊಳಿಸಲು ಸಾವಿರಾರು ಲೀಟರ್ ಗಳಷ್ಟು ನೀರನ್ನು ಪೂಲು ಮಾಡಿದ್ದರು ಎಂದು ಕೊಹ್ಲಿ ನೆರೆ ಮನೆಯವರು ದೂರು ನೀಡಿದ್ದರು.