ಆಸ್ಟ್ರೇಲಿಯಾ ವಿರುದ್ಧ ನಾಳೆ ದ್ವಿತೀಯ ಏಕದಿನ ಕದನ: ಎರಡನೇ ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ

ಮೊದಲ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ, ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮಾ.05 ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ....
ಆಸ್ಟ್ರೇಲಿಯಾ ವಿರುದ್ಧ ನಾಳೆ ದ್ವಿತೀಯ ಏಕದಿನ ಕದನ: ಎರಡನೇ ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧ ನಾಳೆ ದ್ವಿತೀಯ ಏಕದಿನ ಕದನ: ಎರಡನೇ ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ
ನಾಗ್ಪುರ: ಮೊದಲ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ, ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮಾ.05 ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಕಾದಾಟಕ್ಕೆ ಸಜ್ಜಾಗಿದೆ. ಆದರೆ, ಸೋತು ನಿರಾಸೆಗೆ ಜಾರಿರುವ ಪ್ರವಾಸಿ ಆಸೀಸ್‌, ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುವ ಯೋಜನೆಯಲ್ಲಿದೆ.
ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ಇದರಿಂದಾಗಿ ಪಂದ್ಯವನ್ನು ಕೈ ಚೆಲ್ಲಿಕೊಂಡಿತ್ತು. ನಾಳೆ ನಡೆಯುವ ಪಂದ್ಯದಲ್ಲಿನ ಟಾಸ್‌ ಉಭಯ ತಂಡಗಳಿಗೆ ಮುಖ್ಯವಾಗಲಿದೆ. 
ಏಕದಿನ ಸರಣಿಗೂ ಮುನ್ನ ಭಾರತ ಚುಟುಕು ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಆಸೀಸ್‌ಗೆ ಮಣಿದಿತ್ತು. ಆದರೆ, ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಭಾರತ ಗೆದ್ದು ಪ್ರವಾಸಿಗರಿಗೆ ಶಾಕ್‌ ನೀಡಿತ್ತು. 
ಹೈದರಾಬಾದ್‌ ಪಂದ್ಯದಲ್ಲಿ ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡಿದ್ದ ನಾಯಕ ವಿರಾಟ್‌ ಕೊಹ್ಲಿಯ ನಿರ್ಧಾರಕ್ಕೆ ಭಾರತ ತಂಡದ ಬೌಲರ್‌ಗಳು ಸಹಕರಿಸಿದ್ದರು. ಆಸ್ಟ್ರೇಲಿಯಾವನ್ನು 236 ರನ್‌ ಗಳಿಗೆ ಬೌಲರ್‌ಗಳು ನಿಯಂತ್ರಿಸಿದ್ದರು. ನಂತರ, ಗುರಿ ಬೆನ್ನತ್ತಿದ ಭಾರತವನ್ನು ಮಧ್ಯಮ ಕ್ರಮಾಂಕದಲ್ಲಿ ಕೇದಾರ್‌ ಜಾದವ್‌ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು 141 ರನ್‌ ಜತೆಯಾಟ ವಾಡುವ ಮೂಲಕ ಗೆಲುವಿನ ದಡ ಸೇರಿಸಿದ್ದರು. 
ವಿಶ್ವಕಪ್‌ಗೂ ಮುನ್ನ ಕೊನೆಯ ಏಕದಿನ ಸರಣಿ ಆಗಿರುವ ಹಿನ್ನೆಲೆಯಲ್ಲಿ ಭಾರತದ ಪಾಲಿಗೆ ಇದು ಅತ್ಯಂತ ಪ್ರಾಮುಖ್ಯತೆ ಗಳಿಸಿದೆ. ಹಾಗಾಗಿ, ಈ ಸರಣಿ ಗೆದ್ದು ಭಾರತ, ಆತ್ಮ ವಿಶ್ವಾಸವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುವ ತುಡಿತದಲ್ಲಿದೆ. 
ಚೆಂಡು ವಿರೂಪ ಪ್ರಕರಣದಿಂದ ಆಸ್ಟ್ರೇಲಿಯಾ ತಂಡದಿಂದ ನಿಷೇದಕ್ಕೆ ಒಳಗಾದ ಡೇವಿಡ್‌ ವಾರ್ನರ್‌ ಹಾಗೂ ಸ್ವೀವ್‌ ಸ್ಮಿತ್‌ ಅವರ ಅನುಪಸ್ಥಿಯಲ್ಲಿ ಕಾಂಗೂರು ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಲೇ ಇದೆ. ಕಳೆದ ಒಂದು ವರ್ಷದಿಂದ ಆಸ್ಟ್ರೇಲಿಯಾ ಆಡಿರುವ ಒಟ್ಟು 17 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. 
ಬೆಂಗಳೂರಿನಲ್ಲಿ ಚುಟುಕು ಸರಣಿ ಗೆದ್ದ ಬಳಿಕ, ಆಸ್ಟ್ರೇಲಿಯಾ 50 ಓವರ್‌ಗಳ ಮಾದರಿಯ ಸರಣಿಯನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಹುಮ್ಮಸ್ಸಿನಲ್ಲಿತ್ತು. ಆದರೆ, ಆಸೀಸ್‌ನ ಈ ಕನಸಿಗೆ ಮೊದಲನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳು ತಣ್ಣೀರು ಎರಚಿದ್ದರು. ನಾಯಕ ಆ್ಯರೋನ್‌ ಫಿಂಚ್‌ ಅವರು ಸತತ ವೈಫಲ್ಯದಿಂದ ಬಳಲುತ್ತಿದ್ದು, ಅವರು ಬ್ಯಾಟಿಂಗ್‌ ಲಯಕ್ಕೆ ಮರಳುವುದು ಕಾಂಗೂರು ಪಡೆಗೆ ಅನಿವಾರ್ಯವಾಗಿದೆ. 
ಕಳೆದ 2018ರ ಅಕ್ಟೋಬರ್‌ನಿಂದ 17 ಇನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾ ನಾಯಕ ಫಿಂಚ್‌ ಕೇವಲ 158 ರನ್ ಮಾತ್ರ ಕಲೆಹಾಕಿದ್ದಾರೆ. ಇದರಲ್ಲಿ ಕೇವಲ ಎರಡು ಬಾರಿ ಮಾತ್ರ 15 ರನ್‌ ಗಡಿ ದಾಟಿದ್ದಾರೆ. ಹಾಗಾಗಿ, ನಾಳಿನ ಪಂದ್ಯದಲ್ಲಿ ಫಿಂಚ್ ಪಾಲಿಗೆ ಮಹತ್ವದ್ದಾಗಿದೆ.
ಭಾರತ ತಂಡದಲ್ಲಿ ವಿಜಯ್ ಶಂಕರ್‌ ಅಥವಾ ರವೀಂದ್ರ ಜಡೇಜಾ ಅವರು ಯಜುವೇಂದ್ರ ಚಾಹಲ್‌ ಅವರಿಗೆ ಸ್ಥಾನ ಬಿಟ್ಟುಕೊಡಲಿದ್ದಾರೆ. ಆಸೀಸ್‌ ತಂಡದಲ್ಲಿ ಶಾನ್‌ ಮಾರ್ಷ್‌ ಫಿಟ್‌ ಆಗಿದ್ದು, ಅವರು ಅಲೆಕ್ಸ್ ಕ್ಯಾರಿ ಅಥವಾ ಟರ್ನರ್‌ ಅವರ ಸ್ಥಾನದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.  
ಉಭಯ ತಂಡಗಳ ನಡುವಿನ ಕಳೆದ ಐದು ಏಕದಿನ ಪಂದ್ಯಗಳಲ್ಲಿ ಭಾರತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಆಸ್ಟ್ರೇಲಿಯಾ ಕೇವಲ ಒಂದರಲ್ಲಿ ಜಯ ಗಳಿಸಿದೆ. ಭಾರತ ತಂಡಕ್ಕೆ ನಾಯಕ ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ಧೋನಿ ಹಾಗೂ ಜಸ್ಪ್ರೀತ್‌ ಬೂಮ್ರಾ ಕೀ ಆಟಗಾರರಾಗಿದ್ದಾರೆ. ಎದುರಾಳಿ ಪಾಳೆಯದಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌, ಕೌಲ್ಟರ್‌ ನೈಲ್‌ ಹಾಗೂ ಉಸ್ಮಾನ್‌ ಖವಾಜ ಕೀ ಆಟಗಾರರಾಗಿದ್ದಾರೆ.
ಸಂಭ್ಯಾವ ಆಟಗಾರರು
ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಎಂ.ಎಸ್ ಧೋನಿ (ವಿ.ಕೀ), ಕೇದಾರ ಜಾದವ್, ವಿಜಯ್ ಶಂಕರ್ / ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್‌ ಬೂಮ್ರಾ.
ಆಸ್ಟ್ರೇಲಿಯಾ: ಅರೋನ್ ಫಿಂಚ್‌, ಉಸ್ಮಾನ್‌ ಖವಾಜ, ಮಾರ್ಕುಸ್‌ ಸ್ಟೋಯಿನಿಸ್‌, ಪೀಟರ್‌ ಹ್ಯಾಂಡ್ಸ್‌ಕೊಂಬ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಟರ್ನರ್‌/ ಶಾನ್‌ ಮಾರ್ಷ್‌, ಅಲೆಕ್ಸ್ ಕ್ಯಾರಿ (ವಿ.ಕೀ), ನಥಾನ್ ಕೌಲ್ಟರ್-ನೈಲ್, ಪ್ಯಾಟ್ ಕಮಿನ್ಸ್, ಆ್ಯಡಂ ಝಂಪಾ, ಜೇಸನ್ ಬೆಹ್ರೆನ್‌ಡ್ರಾಫ್‌

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com