ನಾಳೆ ಮೂರನೇ ಏಕದಿನ: ಸರಣಿ ಸೋತ ಟೀಂ ಇಂಡಿಯಾಗೆ ಗೆಲುವಿನ ತವಕ

ಸತತ ಎರಡು ಪಂದ್ಯಗಳಲ್ಲಿ ಸೋತು ಸರಣಿ ಬಿಟ್ಟುಕೊಟ್ಟಿರುವ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ನಾಳೆ ಇಲ್ಲಿನ ಬೇ ಓವಲ್‌ ಅಂಗಳದಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವತ್ತ ಚಿತ್ತ ಹರಿಸಲಿದೆ.
ನಾಳೆ ಮೂರನೇ ಏಕದಿನ: ಸರಣಿ ಸೋತ ಟೀಂ ಇಂಡಿಯಾಗೆ ಗೆಲುವಿನ ತವಕ
ನಾಳೆ ಮೂರನೇ ಏಕದಿನ: ಸರಣಿ ಸೋತ ಟೀಂ ಇಂಡಿಯಾಗೆ ಗೆಲುವಿನ ತವಕ
Updated on

ಮೌಂಟ್‌ಮೌಂಗಾನುಯಿ:  ಸತತ ಎರಡು ಪಂದ್ಯಗಳಲ್ಲಿ ಸೋತು ಸರಣಿ ಬಿಟ್ಟುಕೊಟ್ಟಿರುವ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ನಾಳೆ ಇಲ್ಲಿನ ಬೇ ಓವಲ್‌ ಅಂಗಳದಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವತ್ತ ಚಿತ್ತ ಹರಿಸಲಿದೆ.

ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ 347 ರನ್‌ ಗಳಿಸಿದ್ದರೂ, ನ್ಯೂಜಿಲೆಂಡ್‌ ತಂಡವನ್ನು ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಆಕ್ಲೆಂಡ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾಗಿದ್ದರಿಂದ ಆತಿಥೇಯರಿಗೆ ಏಕದಿನ ಸರಣಿ ಬಿಟ್ಟುಕೊಡಲಾಗಿತ್ತು.

ನ್ಯೂಜಿಲೆಂಡ್‌ ಪ್ರವಾಸದ ಎಲ್ಲ ಪಂದ್ಯಗಳಲ್ಲಿ ಬೆಂಚ್‌ ಕಾಯುತ್ತಿದ್ದ ರಿಷಭ್‌ ಪಂತ್‌ ಅವರಿಗೆ ನಾಳಿನ ಪಂದ್ಯದಲ್ಲಿ ಅಂತಿಮ 11ರಲ್ಲಿ ಸ್ಥಾನ ಕಲ್ಪಿಸಬಹುದು. ಟಿ-20 ಸರಣಿಯ ಎಲ್ಲ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಮನೀಶ್‌ ಪಾಂಡೆ ಅವರಿಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಡುವ ಅಂತಿಮ 11 ರಲ್ಲಿ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.

ಕಿವೀಸ್ ವಿರುದ್ಧ ಭಾರತ ಟಿ-20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಮನೀಶ್‌ ಪಾಂಡೆ ಅತ್ಯುತ್ತಮ ಪ್ರದರ್ಶನ ತೋರಿದ್ದರು. ನಾಳಿನ ಪಂದ್ಯದಲ್ಲಿ ಕೇದಾರ್ ಜಾಧವ್ ಸ್ಥಾನಕ್ಕೆ ಕನ್ನಡಿಗನನ್ನು ತುಂಬಲಿದ್ದಾರೆ. "ಈ ವರ್ಷ ಭಾರತ ಏಕದಿನ ಪಂದ್ಯಗಳಲ್ಲಿ ಕಡಿಮೆ ಗಮನ ಹರಿಸುತ್ತವೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಇದರರ್ಥ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರದೆ ಸೋಲು ಅನುಭವಿಸುವುದು ಎಂದರ್ಥವಲ್ಲ.
ಸರಣಿ ಸೋತಿರುವ ನಾವು ನಾಳೆಯ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗೆಲ್ಲುತ್ತೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಶಾರ್ದೂಲ್ ಠಾಕೂರ್‌ ತಿಳಿಸಿದ್ದರು.

"ಎಲ್ಲ ಪಂದ್ಯಗಳು ನಮಗೆ ಅತಿ ಮುಖ್ಯ. ಈಗಾಗಲೇ ಸರಣಿ ಕಳೆದುಕೊಂಡಿದ್ದೇವೆ ಎಂದು ಕೊನೆಯ ಪಂದ್ಯ ಮುಖ್ಯವಲ್ಲ ಎಂದು ನಾವು ಪರಿಗಣಿಸುವುದಿಲ್ಲ. ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳು ಮುಖ್ಯವಾಗಿರುತ್ತವೆ. ನಾಳಿನ ಪಂದ್ಯದಲ್ಲಿ ಎಲ್ಲವನ್ನು ಮರೆತು ಸ್ವತಂತ್ರವಾಗಿ ಆಡುತ್ತೇವೆ,' ಎಂದಿದ್ದರು.

ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಿಂದ ಹೊರಗೆ ಇದ್ದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ನಾಳಿನ ಪಂದ್ಯಕ್ಕೆ ಮರಳುತ್ತಿದ್ದಾರೆ. ಭಾರತದ ವಿರುದ್ಧ ಚುಟುಕು ಸರಣಿ ವೈಟ್‌ ವಾಶ್‌ ಅನುಭವಿಸಿದ್ದ ನ್ಯೂಜಿಲೆಂಡ್‌ ನಾಳಿನ ಪಂದ್ಯ ಗೆದ್ದು ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

ಎರಡನೇ ಕಾದಾಟದಲ್ಲಿ ಅನಾರೋಗ್ಯದ ಹೊರತಾಗಿಯೂ ಟಿಮ್‌ ಸೌಥಿ ಭಾರತದ ಮೇಲೆ ಮಾರಕ ದಾಳಿ ನಡೆಸಿದ್ದರು. ನಾಳಿನ ಪರಿಸ್ಥಿತಿಗೆ ತಕ್ಕಂತೆ ಸೌಥಿ ಆಡಿಸಲು ನಿರ್ಧರಿಸಲಾಗುತ್ತದೆ. ಒಂದು ವೇಳೆ ಅವರಿಗೆ ವಿಶ್ರಾಂತಿ ನೀಡಿದರೆ, ಸ್ಕಾಟ್‌ ಕುಗ್ಲೇಯಿನ್ ಅಂತಿಮ 11ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿರಿಯ ಮಧ್ಯಮ ಕ್ರಮಾಂಕದ ಆಟಗಾರ ರಾಸ್‌ ಟೇಲರ್ ಭರ್ಜರಿ ಲಯದಲ್ಲಿದ್ದು. ಬ್ಯಾಟಿಂಗ್ ಸ್ನೇಹಿ ಪಿಚ್ ಬೇ ಓವಲ್‌ ಅಂಗಳದಲ್ಲಿ ಮತ್ತೊಮ್ಮೆ ಸಿಡಿಯಲು ಸನ್ನದ್ಧರಾಗುತ್ತಿದ್ದಾರೆ. 2019ರ ಸರಣಿಯಲ್ಲಿ ಇದೇ ಅಂಗಳದಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿತ್ತು. ಇದು ಬ್ಯಾಟಿಂಗ್ ಸ್ನೇಹಿಯಾಗಿದ್ದರಿಂದ ರನ್‌ ಹೊಳೆ ಹರಿಸುವ ಸಂಭವ ಹೆಚ್ಚಿದೆ.

ಮೌಂಟ್‌ಮೌಂಗಾನುಯಿ ಅಂಗಳದಲ್ಲಿ ಭಾರತ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದೇ ಯಶಸ್ಸನ್ನು ನಾಳೆಯೂ ಮುಂದುವರಿಸುವ ತುಡಿತ ಹೊಂದಿರುವ ಭಾರತ ಸರಣಿ ವೈಟ್‌ ವಾಶ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಲಿದೆ.

ಸಂಭಾವ್ಯ ಆಟಗಾರರು

ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್‌, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್/ರಿಷಭ್ ಪಂತ್, ಮನೀಶ್ ಪಾಂಡೆ/ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯಜ್ವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಜಸ್ಪ್ರಿತ್ ಬುಮ್ರಾ.

ನ್ಯೂಜಿಲೆಂಡ್‌: ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್‌, ಕೇನ್‌ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್, ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್ಹೋಮ್, ಟಾಮ್‌ ಬ್ಲಂಡೆಲ್, ಟಿಮ್ ಸೌಥಿ/ ಸ್ಕಾಟ್‌ ಕುಗ್ಲೇಯಿನ್, ಕೈಲ್‌ ಜ್ಯಾಮಿಸನ್‌, ಹಾಮೀಶ್ ಬೆನೆಟ್. ಇಶ್‌ ಸೋಧಿ/ಮಿಚೆಲ್ ಸ್ಯಾಂಟ್ನರ್

ಸಮಯ: ನಾಳೆ ಬೆಳಗ್ಗೆ 07: 30
ಸ್ಥಳ: ಬೇ ಓವಲ್, ಮೌಂಟ್‌ಮೌಂಗಾನುಯಿ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com