ರಾಹುಲ್, ಶ್ರೇಯಸ್ ಮ್ಯಾಚ್ ವಿನ್ನರ್‌ಗಳು, ಟಿ20 ವಿಶ್ವಕಪ್ ಗೆ ಪ್ರಮುಖ ಆಟಗಾರರನ್ನು ಗುರುತಿಸಿದ್ದೇವೆ: ರಾಥೋಡ್

ಕಳೆದ ಎರಡು ಟಿ-20 ಪಂದ್ಯಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನವನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಶ್ಲಾಘಿಸಿದ್ದಾರೆ.
ರವಿ ಶಾಸ್ತ್ರಿ - ವಿಕ್ರಮ್ ರಾಥೋಡ್
ರವಿ ಶಾಸ್ತ್ರಿ - ವಿಕ್ರಮ್ ರಾಥೋಡ್
Updated on

ಹ್ಯಾಮಿಲ್ಟನ್: ಕಳೆದ ಎರಡು ಟಿ-20 ಪಂದ್ಯಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನವನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಶ್ಲಾಘಿಸಿದ್ದಾರೆ.

ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ನಾಳೆ ಮೂರನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಪಂದ್ಯದ ನಿಮಿತ್ತ ಮಾತನಾಡಿದ ರಾಥೋಡ್,'' ಹಲವು ಅವಕಾಶ ತೆಗೆದುಕೊಂಡು ರಾಹುಲ್ ಹಾಗೂ ಅಯ್ಯರ್ ತಾವು ಪಂದ್ಯ ವಿಜೇತರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಪ್ರದರ್ಶನ ತಂಡದ ಗೆಲುವಿಗೆ ನೆರವಾಗಿದೆ. ಇದು ಅವರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ,' ಎಂದು ಹೇಳಿದರು.

"ಕೆಎಲ್ (ರಾಹುಲ್) ಮತ್ತು ಶ್ರೇಯಸ್ ಅವರನ್ನು ಯುವ ಕ್ರಿಕೆಟಿಗರಂತೆ ನೋಡುತ್ತಿದ್ದೇನೆ, ನನ್ನ ಮನಸ್ಸಿನಲ್ಲಿ, ಅವರು ಪಂದ್ಯ-ವಿಜೇತರು ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಅವರು ಈಗ ತಮ್ಮ ಅವಕಾಶಗಳನ್ನು ಪಡೆಯುತ್ತಿದ್ದಾರೆ ಮತ್ತು ಅವರು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ, ಅದು ನೋಡಲು ಅದ್ಭುತವಾಗಿದೆ" ಎಂದರು.

ಬ್ಯಾಟಿಂಗ್ ತರಬೇತುದಾರರ ಪ್ರಕಾರ, ಅಯ್ಯರ್ ಅವರ ಅತಿದೊಡ್ಡ ಶಕ್ತಿ ಅವರ ಸಕಾರಾತ್ಮಕ ಮನಸ್ಸಿನ ಚೌಕಟ್ಟು, ಇದು ಉದ್ವಿಗ್ನ ಸಂದರ್ಭಗಳಲ್ಲಿ ಆಡಲು ಸಹಾಯ ಮಾಡುತ್ತದೆ. "ಬ್ಯಾಟಿಂಗ್ ಕೌಶಲ್ಯಗಳನ್ನು ಹೊಂದಿರುವುದರ ಜತೆಗೆ ಮೈಂಡ್ ಸೆಟ್ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು (ಅಯ್ಯರ್) ದೊಡ್ಡ ಆಟಗಾರನೆಂದು ನಾನು ನಂಬುತ್ತೇನೆ ಮತ್ತು ಇದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಇಲ್ಲಿ ಉಳಿಯಲು ಮತ್ತು ಆ ಮನಸ್ಥಿತಿ ಅವರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಅವರಿಗೆ ಇರುವ ದೊಡ್ಡ ಪ್ರಯೋಜನವಾಗಿದೆ "ಎಂದು ಅವರು ಹೇಳಿದರು.

ಮೊದಲೆರಡು ಪಂದ್ಯಗಳಾಡಿದ್ದ ಈಡನ್ ಪಾರ್ಕ್ ಅಂಗಳ ವಿಸ್ತಿರ್ಣದಲ್ಲಿ ಕಿರಿದಾಗಿತ್ತು. ಆದರೆ, ಇನ್ನು ಮುಂದಿನ ಮೂರು ಪಂದ್ಯಗಳು ದೊಡ್ಡ ಅಂಗಳದಲ್ಲಿ ನಡೆಯಲಿದೆ. ಹ್ಯಾಮಿಲ್ಟನ್, ವೆಲ್ಲಿಂಗ್ಟನ್ ಹಾಗೂ ಮೌಂಗುನುಯಿ ಅಂಗಳಗಳಲ್ಲಿ ಪಂದ್ಯ ಇನ್ನಷ್ಟು ಕಠಿಣವಾಗಲಿದೆ. ನಾಳಿನ ಪಂದ್ಯದಲ್ಲೂ ಯಾವುದೇ ಬದಲಾವಣೆ ಇಲ್ಲ. ಕಳೆದ ಎರಡು ಪಂದ್ಯಗಳ ಯೋಜನೆಯೊಂದಿಗೆ ನಾಳಿನ ಪಂದ್ಯ ಆಡಲಾಗುವುದು ಎಂದಿದ್ದಾರೆ.

"ಇಲ್ಲಿನ ಪರಿಸ್ಥಿತಿಗಳನ್ನು ನೋಡಿಕೊಂಡು ನಾವು ಹೋಗಬೇಕಾಗುತ್ತದೆ. ಸೆಡ್ಡಾನ್ ಪಾರ್ಕ್ ದೊಡ್ಡದಾದ ಅಂಗಳವಾಗಿದೆ. ಆದಾಗ್ಯೂ, ನಾವು ಸಾಮಾನ್ಯ ಕ್ರಿಕೆಟ್ ಆಡಲು ಎದುರು ನೋಡುತ್ತಿದ್ದೇವೆ. ಬೇರೆ ಇನ್ನೇನು ನಾನು ನೋಡಲು ಬಯಸುವುದಿಲ್ಲ. ಬೌಲರ್ ಗಳು ಲೆನ್ತ್ ಕಡೆ ಗಮನ ಹರಿಸಬಹುದು. ಆದರೆ, ಬ್ಯಾಟ್ಸ್‌ಮನ್‌ ಗಳಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ,'' ಎಂದು ಹೇಳಿದರು.

ಇನ್ನು ಇದೇ ವರ್ಷ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ತಂಡದ ಮ್ಯಾನೇಜ್ ಮೆಂಟ್ ಈಗಾಗಲೇ ಕೆಲವು ಪ್ರಮುಖ ಆಟಗಾರರನ್ನು ಗುರುತಿಸಿದೆ ಎಂದು ರಾಥೋಡ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com