ಕ್ರಿಕೆಟ್ ಪುನಾರಂಭವಾದಾಗ ಅಪ್ಪುಗೆ ಇಲ್ಲ, ವಿಕೆಟ್ ಬಿದ್ದ ಸಂಭ್ರಾಮಾಚರಣೆಗೆ ಕೇವಲ ನಮಸ್ತೆಯಷ್ಟೇ

ಎಲ್ಲವೂ ಸರಿಯಾಗಿದ್ದಿದ್ದರೆ ಭಾರತ ಐಪಿಎಲ್ ಆಯೋಜನೆಯಲ್ಲಿ ನಿರತವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ  ಕ್ರಿಕೆಟ್ ನ ಎಲ್ಲಾ ಪಂದ್ಯಗಳೂ ರದ್ದಾಗಿದೆ.  
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ
Updated on

ಎಲ್ಲವೂ ಸರಿಯಾಗಿದ್ದಿದ್ದರೆ ಭಾರತ ಐಪಿಎಲ್ ಆಯೋಜನೆಯಲ್ಲಿ ನಿರತವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ  ಕ್ರಿಕೆಟ್ ನ ಎಲ್ಲಾ ಪಂದ್ಯಗಳೂ ರದ್ದಾಗಿದೆ.  

ಕೋವಿಡ್-19 ಪರಿಸ್ಥಿತಿ ಸುಧಾರಿಸಿ ಕ್ರಿಕೆಟ್ ಪಂದ್ಯಗಳು ಮರಳಿ ಪ್ರಾರಂಭವಾಗುವುದರ ಬಗ್ಗೆ ಯಾರಿಗೂ ಖಾತರಿ ಇಲ್ಲ. ಈ ನಡುವೆ ಭಾರತದ ಉಪನಾಯಕ ಅಜಿಂಕ್ಯಾ ರೆಹಾನೆ ಕ್ರಿಕೆಟ್ ಮುಂದಿನ ದಿನಗಳಲ್ಲಿ ಹೇಗಿರಲಿದೆ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬ ಬಗ್ಗೆ ಮಾತನಾಡಿದ್ದಾರೆ. 

ಕ್ರಿಕೆಟ್ ಪುನಾರಂಭವಾದರೆ ಅಭಿಮಾನಿಗಳ ಸುರಕ್ಷತೆ ಮುಖ್ಯವಾಗಿರಲಿದೆ. ಕೋವಿಡ್-19 ಕ್ಕೆ ಚುಚ್ಚುಮದ್ದು ಕಂಡುಹಿಡಿಯುವವರೆಗೂ ಏನಾಗಲಿದೆ ಎಂದು ಯಾರಿಗೂ ಗೊತ್ತಿಲ್ಲ. ಆನ್ ಫೀಲ್ಡ್ ನಲ್ಲಿ ಕ್ರಿಕೆಟ್ ಹೆಚ್ಚಿನ ಬದಲಾವಣೆ ಕಾಣಲಿದೆ ಎಂದೆನಿಸುವುದಿಲ್ಲ, ಆಫ್ ಫೀಲ್ಡ್ ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ವಿಕೆಟ್ ಉರುಳಿದಾಗ ಈ ಹಿಂದೆ ಅಪ್ಪುಗೆಯ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದೆವು. ಆದರೆ ಇನ್ನು ಮುಂದಿನ ದಿನಗಳಲ್ಲಿ ಇದು ಬದಲಾವಣೆಯಾಗಲಿದೆ. ವಿಕೆಟ್ ಬಿದ್ದಾಗ ನಮಸ್ತೆ ಹೇಳುವ ಮೂಲಕವಷ್ಟೇ ಸಂಬ್ರ್ಹಮಾಚರಣೆ ನಡೆಯಲಿದೆ ಎಂದು ಹೇಳಿದ್ದಾರೆ.   

ಇದೇ ವೇಳೆ ಕೋವಿಡ್-19,  ಚೆಂಡಿನ ಹೊಳಪು ಹೆಚ್ಚುಸುವುದಕ್ಕೆ ಬೆವರು ಹಚ್ಚುವುದರ ಬಗ್ಗೆಯೂ ಚರ್ಚೆಗಳನ್ನು ಪ್ರಾರಂಭವಾಗುವಾಗುವಂತೆ ಮಾಡಿರುವ ಬಗ್ಗೆಯೂ ಮಾತನಾಡಿರುವ ಅಜಿಂಕ್ಯ ರೆಹಾನೆ, ಐಸಿಸಿ ಚೆಂಡು ವಿರೂಪಗೊಳಿಸುವುದನ್ನು ಕಾನೂನುಬದ್ಧ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com