ಶ್ರೀಲಂಕಾ ಕ್ರಿಕೆಟ್ ಸ್ಪಿನ್ ಲೆಜೆಂಡ್ ಮುರಳೀಧರನ್ ಬಯೋಪಿಕ್ ನಲ್ಲಿ ವಿಜಯ್ ಸೇತುಪತಿ; ನಟನ ಬಗ್ಗೆ ಕ್ರಿಕೆಟಿಗ ಹೇಳಿದ್ದೇನು?

ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರದಲ್ಲಿ ಖ್ಯಾತ ತಮಿಳುನಟ ವಿಜಯ್ ಸೇತುಪತಿ ನಟಿಸುತ್ತಿದ್ದು, ಈ ಬಗ್ಗೆ ಇದೇ ಮೊದಲ ಬಾರಿಗೆ ಮುರಳೀಧರನ್ ಪ್ರತಿಕ್ರಿಯಿಸಿದ್ದಾರೆ.
ಮುರಳೀಧರನ್-ವಿಜಯ್ ಸೇತುಪತಿ
ಮುರಳೀಧರನ್-ವಿಜಯ್ ಸೇತುಪತಿ
Updated on

ಚೆನ್ನೈ: ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರದಲ್ಲಿ ಖ್ಯಾತ ತಮಿಳುನಟ ವಿಜಯ್ ಸೇತುಪತಿ ನಟಿಸುತ್ತಿದ್ದು, ಈ ಬಗ್ಗೆ ಇದೇ ಮೊದಲ ಬಾರಿಗೆ ಮುರಳೀಧರನ್ ಪ್ರತಿಕ್ರಿಯಿಸಿದ್ದಾರೆ.

ಹೌದು.. ಶ್ರೀಲಂಕಾ ಕ್ರಿಕೆಟ್ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರ ಸೆಟ್ಟೇರಿದ್ದು, ಈ ವಿಶಿಷ್ಠ ಚಿತ್ರದಲ್ಲಿ ಖ್ಯಾತ ತಮಿಳುನಟ ವಿಜಯ್ ಸೇತುಪತಿ ಮುರಳೀಧರನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಭಾರತದಲ್ಲಿ ಸಾಕಷ್ಟು ಬಯೋಪಿಕ್ ಗಳು ಬಂದುಹೋಗಿವೆ. ‘ಮೇರಿ  ಕೋಮ್’, ‘ದಂಗಲ್’, ‘ಭಾಗ್ ಮಿಲ್ಕಾ ಭಾಗ್‌’, ‘ಎಂ.ಎಸ್. ದೋನಿ’, ‘ಸಚಿನ್ ತೆಂಡೂಲ್ಕರ್’, ‘ಅಜರ್’, ‘ಸೂರ್ಮಾ’ ಹೀಗೆ ಕ್ರೀಡಾಪಟುಗಳ ಜೀವನಗಾಥೆಗಳು ಬೆಳ್ಳಿ ಪರದೆ ಆವರಿಸಿ ಪ್ರೇಕ್ಷಕರಿಗೆ ಮೋಡಿ ಮಾಡಿವೆ. ಈಗ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಅವರ ಸರದಿ.

ಮುರಳೀಧರನ್ ಜೀವನ ಕಥೆಯ ಚಿತ್ರಕ್ಕೆ 800 ಎಂದು ನಾಮಕರಣ ಮಾಡಲಾಗಿದ್ದು, ತಮಿಳು ನಿರ್ದೇಶಕ ಎಂ.ಎಸ್‌. ಶ್ರೀಪತಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೂವಿ ಟ್ರೈನ್‌ ಮೋಷನ್‌ ಪಿಕ್ಚರ್‌ ಮತ್ತು ದಾರ್‌ ಮೋಷನ್‌ ಪಿಕ್ಚರ್‌ನಡಿ ಇದಕ್ಕೆ ಬಂಡವಾಳ ಹೂಡಲಾಗುತ್ತಿದೆ. 2021ಕ್ಕೆ ಈ ಸಿನಿಮಾ ಸೆಟ್ಟೇರುವ  ನಿರೀಕ್ಷೆಯಿದೆ. ಶ್ರೀಲಂಕಾ, ಯುಕೆ, ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಚಿತ್ರೀಕರಣ ನಡೆಯಲಿದೆ. 

7 ಭಾಷೆಗಳಲ್ಲಿ ಚಿತ್ರ ನಿರ್ಮಾಣ
ಮುರಳೀಧರನ್ ಮತ್ತು ಸೇತುಪತಿ ಅವರ ಜನಪ್ರಿಯತೆಯಿಂದಾಗಿ, ಈ ಚಿತ್ರವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಗೂ ಹಿಂದಿ, ಬಂಗಾಳಿ ಮತ್ತು ಸಿಂಹಳೀಯ ಭಾಷೆಗಳಲ್ಲಿ ಡಬ್ ಮಾಡಲಾಗುವುದು. ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಅಂತರರಾಷ್ಟ್ರೀಯ ಆವೃತ್ತಿಯನ್ನು ಸಹ ಯೋಜಿಸಲಾಗಿದೆ. ಈ ಚಿತ್ರವು  ಅತಿದೊಡ್ಡ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.

ತಮ್ಮ ಬಯೋಪಿಕ್ ಗೆ ವಿಜಯ್ ಸೇತುಪತಿ ಉತ್ತಮ ಆಯ್ಕೆ
ಪ್ರಸ್ತುತ ಐಪಿಎಲ್ 2020 ರಲ್ಲಿ ಪ್ರಸ್ತುತ ಸನ್‌ರೈಸರ್ಸ್‌ನಿಂದ ತಂಡಕ್ಕೆ ಸ್ಪಿನ್ ಸಲಹೆಯನ್ನು ನೀಡುತ್ತಿರುವ ಮುರಳೀಧರನ್, ಚಲನಚಿತ್ರ ಘೋಷಣೆಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಲೈವ್ ಸಮಯದಲ್ಲಿ ಸೇತುಪತಿ ಈ ಚಿತ್ರಕ್ಕೆ ಅತ್ಯುತ್ತಮ ಆಯ್ಕೆ ಎಂದು  ಹೇಳಿದರು. "ಸ್ಕ್ರಿಪ್ಟ್ ಸಿದ್ಧವಾದ ನಂತರ, ಈ ಚಿತ್ರಕ್ಕೆ ಉತ್ತಮವಾದ ಫಿಟ್ ವಿಜಯ್ ಸೇತುಪತಿ ಹೊರತುಪಡಿಸಿ ಬೇರೆ ಯಾರು ಅಲ್ಲ ಎಂದು ನಾವು ಭಾವಿಸಿದ್ದೇವೆ" ಎಂದು ಮುರಳೀಧರನ್ ಹೇಳಿದರು.

"ಅವರು ತುಂಬಾ ಪ್ರತಿಭಾವಂತ ನಟ ಮತ್ತು ಅವರು ಬೌಲಿಂಗ್ ಅಭಿವ್ಯಕ್ತಿಗಳನ್ನು ಮಾಡುತ್ತಾರೆ ಎಂದು ನಾನು  ಭಾವಿಸುತ್ತೇನೆ. ವಿಜಯ್ ಅವರು ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವುದರಿಂದ ನಾನು ಸಂಪೂರ್ಣವಾಗಿ ನಂಬುತ್ತೇನೆ ಮತ್ತು ಅವರು ಖಂಡಿತವಾಗಿಯೂ ಚಿತ್ರಕ್ಕಾಗಿ ಅದ್ಭುತಗಳನ್ನು ಮಾಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ಇದೆ." ಎಂದಿದ್ದಾರೆ. 

ಏತನ್ಮಧ್ಯೆ, ಅವರ ಅಭಿಮಾನಿಗಳು 'ಮಕ್ಕಲ್ ಸೆಲ್ವನ್' ಎಂದು ಜನಪ್ರಿಯವಾಗಿರುವ ಸೇತುಪತಿ, 'ಆಕರ್ಷಕ ಪಾತ್ರ ಮತ್ತು ವ್ಯಕ್ತಿತ್ವದ' ಕಥೆಯನ್ನು ಕೇಳಿ ರೋಮಾಂಚನಗೊಂಡಿದ್ದಾರೆ ಎಂದು ಹೇಳಿದರು. "ಅವರ ಕಥೆಯನ್ನು ಕೇಳಲು ಮತ್ತು ಮುರಳಿ ಸರ್ ಅವರೊಂದಿಗೆ ಸಮಯ ಕಳೆಯಲು ನಿಜವಾಗಿಯೂ  ಸಂತೋಷವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ಮುರಳೀಧರನ್‌ ಬಯೋಪಿಕ್‌ ನಿರ್ಮಾಣವು ಅವರ ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.

ಕ್ರಿಕೆಟ್‌ ಅಭಿಮಾನಿಗಳೂ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಮುರಳೀಧರನ್‌ ಅವರ ದೇಹದಾರ್ಢ್ಯಕ್ಕೆ ತಕ್ಕಂತೆ ವಿಜಯ್‌ ಸೇತುಪತಿ ಕಸರತ್ತು  ನಡೆಸಬೇಕಿದೆ ಎಂಬ ಸಲಹೆಯನ್ನೂ ನೀಡಿದ್ದಾರೆ. ಮುರಳಿ ಬಯೋಪಿಕ್‌ನಲ್ಲಿ ನಟಿಸುವುದಾಗಿ ವಿಜಯ್‌ ಸೇತುಪತಿ ಘೋಷಿಸಿದ್ದು ರಾಜಕೀಯ ಬಣ್ಣ ಪಡೆದುಕೊಂಡಿತ್ತು. ವಿಜಯ್‌ ಅವರ ನಿರ್ಧಾರವನ್ನು ಹಲವು ರಾಜಕಾರಣಿಗಳು ವಿರೋಧಿಸಿದ್ದು ಉಂಟು. ಶ್ರೀಲಂಕಾದಲ್ಲಿರುವ ತಮಿಳು ಭಾಷಿಕರಿಗೆ ಗೌರವ ನೀಡುವ  ಸಲುವಾಗಿ ಬಯೋಪಿಕ್‌ನಿಂದ ಹಿಂದೆ ಅವರು ಸರಿದಿದ್ದರು. ಈಗ ಮುರಳೀಧರನ್ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com