ಟೀಂ ಇಂಡಿಯಾ ಮಾಜಿ ಆಲ್  ರೌಂಡರ್ ಬಾಪು ನಾಡಕರ್ಣಿ ನಿಧನ

ಭಾರತದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ (86) ಅವರ ನಿಧನಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ಸೂಚಿಸಿದೆ. ಅವರು ಶುಕ್ರವಾರ ನಿಧನರಾದ್ದಾರೆ.
ಬಾಪು ನಾಡಕರ್ಣಿ
ಬಾಪು ನಾಡಕರ್ಣಿ

ನವದೆಹಲಿ: ಭಾರತದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ (86) ಅವರ ನಿಧನಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ಸೂಚಿಸಿದೆ. ಅವರು ಶುಕ್ರವಾರ ನಿಧನರಾದ್ದಾರೆ.

ನಾಡಕರ್ಣಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅವರ ಸಾವಿನೊಂದಿಗೆ ಕ್ರಿಕೆಟ್ ಜಗತ್ತಿಗೆ ನಷ್ಟವಾಗಿದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಮುಂಬೈನ ಮಾಜಿ ನಾಯಕ ಮಿಲಿಂದ್ ರೆಗೆ ಸೇರಿದಂತೆ ಅನೇಕ ಕ್ರಿಕೆಟಿಗರು ನಾಡಕರ್ಣಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಡಿಸೆಂಬರ್ 1955 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಚೊಚ್ಚಲ ಪ್ರವೇಶ ಮಾಡಿದ್ದ ನಾಡಕರ್ಣಿ 41 ಟೆಸ್ಟ್ ಪಂದ್ಯಗಳನ್ನಾಡಿ , 25.70 ಸರಾಸರಿಯಲ್ಲಿ 1414 ರನ್ ಗಳಿಸಿದರು.

ಚೆಂಡಿನೊಂದಿಗೆ ಅವರ ಕ್ಲಿನಿಕಲ್ಎಕಾನಮಿ ಅವರಿಗೆ ಹಲವಾರು ಪ್ರಶಂಸೆ ಸಿಕ್ಕುವಂತೆ ಮಾಡಿದ್ದು 41 ಟೆಸ್ಟ್ ಪಂದ್ಯಗಳಲ್ಲಿ, ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್ 88 ವಿಕೆಟ್ ಗಳನ್ನು ಗಳಿಸಿದ್ದರು.

ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿ ಮತ್ತು  ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಜಂಟಿ ಗೌರವಾನ್ವಿತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, 10000 ಎಸೆತ ಕೇವಲ 191 ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಕಬಳಿಸಿದ್ದ ನಾಡಕರ್ಣಿ  14 ಶತಕ ಮತ್ತು 46 ಅರ್ಧಶತಕಗಳೊಂದಿಗೆ 8880 ಪ್ರಥಮ ದರ್ಜೆ ರನ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com