ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ: ರಹಾನೆ

ಶೀಘ್ರದಲ್ಲೇ ಏಕದಿನ ಪಂದ್ಯಗಳಿಗೆ ಮರಳುವ ವಿಶ್ವಾಸವಿದೆ ಎಂದು ಟೀಮ್ ಇಂಡಿಯಾದ ಭರವಸೆಯ ಆಟಗಾರ ಅಜಿಂಕ್ಯ ರಹಾನೆ ಹೇಳಿದ್ದಾರೆ.
ರಹಾನೆ
ರಹಾನೆ

ನವದೆಹಲಿ: ಶೀಘ್ರದಲ್ಲೇ ಏಕದಿನ ಪಂದ್ಯಗಳಿಗೆ ಮರಳುವ ವಿಶ್ವಾಸವಿದೆ ಎಂದು ಟೀಮ್ ಇಂಡಿಯಾದ ಭರವಸೆಯ ಆಟಗಾರ 
ಅಜಿಂಕ್ಯ ರಹಾನೆ ಹೇಳಿದ್ದಾರೆ.

ರಹಾನೆ ಕೊನೆಯ ಬಾರಿಗೆ 2018 ರ ಫೆಬ್ರವರಿಯಲ್ಲಿ ಏಕದಿನ ಪಂದ್ಯ ಆಡಿದ್ದರು. ಭಾರತೀಯ ಟೆಸ್ಟ್ ತಂಡದ ಉಪನಾಯಕ ರಹಾನೆ,
 ಕ್ರಿಕ್ ಇನ್‌ಫೊ ಗೆ ನೀಡಿದ ಸಂದರ್ಶನದಲ್ಲಿ "ಯಾವುದೇ ಕ್ರಮಾಂಕದಲ್ಲಿ  ಬ್ಯಾಟಿಂಗ್ ಮಾಡಲು ನಾನು ಸಿದ್ಧ. ನಾನು ಏಕದಿನ 
ಕ್ರಿಕೆಟ್‌ಗೆ ಮರಳುವ ಭರವಸೆ ಇದೆ” ಎಂದಿದ್ದಾರೆ.

ಆರಂಭಿಕ ಅಥವಾ ನಂಬರ್ 4 ಯಾವುದೇ ಸ್ಥಾನದಲ್ಲಾದರೂ ಬ್ಯಾಟಿಂಗ್ ಮಾಡಲು ಸಿದ್ದ. ಆದರೆ,ಅವಕಾಶ ಯಾವಾಗ ದೊರೆಯಲಿದೆ ಎಂಬುದು ಗೊತ್ತಿಲ್ಲ. ಎಲ್ಲಾ ಮಾದರಿಯ ಕ್ರಿಕೆಟ್ ಆಡಲು ಮಾನಸಿಕವಾಗಿ ಸಿದ್ಧವಾಗಿರುವುದಾಗಿ 32 ವರ್ಷದ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com