ಜಾತಿ ನಿಂದನೆ ಆರೋಪ: ಯುವರಾಜ್‌ ಸಿಂಗ್‌ ವಿರುದ್ಧ ಕೇಸ್ ದಾಖಲು

ಟೀಮ್‌ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್‌ ವಿರುದ್ಧ ಬಳಕೆ ಮಾಡಿರುವ ಪದದಿಂದಾಗಿ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್

ನವದೆಹಲಿ: ಟೀಮ್‌ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್‌ ವಿರುದ್ಧ ಬಳಕೆ ಮಾಡಿರುವ ಪದದಿಂದಾಗಿ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಟೀಮ್‌ ಇಂಡಿಯಾ ಓಪನರ್‌ ರೋಹಿತ್‌ ಶರ್ಮಾ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿದ್ದ ಭಾರತ ತಂಡಕ್ಕೆ ಎರಡು ವಿಶ್ವಕಪ್‌ ಗೆದ್ದುಕೊಟ್ಟ ಸ್ಟಾರ್‌ ಆಲ್‌ರೌಂಡರ್‌ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಆನ್‌ಲೈನ್‌ ಇದ್ದಂತದ ಚಹಲ್‌ ಮತ್ತು ಕುಲ್ದೀಪ್‌ ಅವರನ್ನು 'ಭಂಗಿ' ಎಂದು ಕರೆದು ಅನಗತ್ಯವಾಗಿ ವಿವಾದವನ್ನು ಮೇಲೆ ಎಳೆದಕೊಂಡಿದ್ದಾರೆ.

'ಭಂಗಿ' ಎಂಬುದು ಉತ್ತರ ಭಾರದಲ್ಲಿನ ದಲಿತ ಜಾತಿಯ ಜನರನ್ನು ಕರೆಯಲು ಮೇಲ್ವರ್ಗದ ಜನರು ಬಳಕೆ ಮಾಡುವ ಪದವಾಗಿದೆ. ಅಂದಹಾಗೆ ಜಾತಿ ನಿಂದನೆ ನಿರ್ಮೂಲನೆ ಸಲುವಾಗಿ ಈ ಪದ ಬಳಕೆಗೆ ನಿಷೇಧವಿದೆ. ಹೀಗಿದ್ದರೂ ಯುವರಾಜ್‌ ಸಿಂಗ್‌ ಸೋಷಿಯಲ್‌ ಮೀಡಿಯಾ ವೇದಿಕೆಯಲ್ಲಿ ಈ ಪದ ಬಳಕೆ ಮಾಡಿದ್ದು, ಇದರ ವಿರುದ್ಧ ಹರಿಯಾಣದಲ್ಲಿ ದಲಿತ ಪರ ಹೋರಾಟಗಾರ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ದಲಿತ ಪರ ಹಕ್ಕುಗಳ ಹೋರಾಟಗಾರ ಮತ್ತು ವಕೀಲ ರಜತ್‌ ಕಲ್ಸನ್ ನೀಡಿರುವ ದೂರಿನ ಮೇರೆಗೆ ಹಿಸಾರ್‌ ಜಿಲ್ಲೆಯ ಹನ್ಸಿ ಪೊಲೀಸ್‌ ಠಾಣೆಯಲ್ಲಿ ಯುವರಾಜ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com