ಮಧ್ಯದಲ್ಲೇ ಐಪಿಎಲ್ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಯೋಜನೆಗೆ ತಣ್ಣೀರು!

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಧ್ಯದಲ್ಲಿ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಆಸೆಗೆ ಪೆಟ್ಟು ಬಿದ್ದಿದೆ. 
ಆರ್ಸಿಬಿ
ಆರ್ಸಿಬಿ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಧ್ಯದಲ್ಲಿ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಆಸೆಗೆ ಪೆಟ್ಟು ಬಿದ್ದಿದೆ. 

ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ಆಟಗಾರರನ್ನು ಕರಿಸಿಕೊಳ್ಳಲು ವಿಶೇಷ ವಿಮಾನಗಳ ಯೋಜನೆ ಮಾಡಿಲ್ಲ. ಇನ್ನು ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಹಿನ್ನೆಲೆ ಆಸ್ಟ್ರೇಲಿಯಾ ಮೇ 15ರವರೆಗೆ ಭಾರತದಿಂದ ಬರುವ ಎಲ್ಲ ವಿಮಾನಗಳನ್ನು ರದ್ದು ಮಾಡಿದೆ.

'ಸದ್ಯ ಯಾವುದೇ ವಿಶೇಷ ವಿಮಾನಗಳನ್ನು ಓಡಿಸುವ ಯೋಜನೆ ಇಲ್ಲ. ನಾವು ಬಿಸಿಸಿಐ ಹಾಗೂ ಆಟಗಾರರೊಂದಿಗೆ ಸತತ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದೇವೆ' ಎಂದು ಸಿಎ ಮಧ್ಯಂತರ ಸಿಇಒ ನಿಕ್ ಹಾಕ್ಲಿ ತಿಳಿಸಿದ್ದಾರೆ.

'ಬಿಸಿಸಿಐ ನಿರ್ಮಿಸಿದ ಬಯೊ-ಬಬಲ್ ವ್ಯವಸ್ಥೆಯಲ್ಲಿ ಆಟಗಾರರು ಆರೋಗ್ಯವಾಗಿದ್ದಾರೆ. ನಾವು ಮಾತನಾಡಿದ ಆಟಗಾರರು ತಮ್ಮ ಕ್ರೀಡಾ ಬದ್ಧತೆಯನ್ನು ಮೆರೆದಿದ್ದಾರೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ' ಎಂದು ಹಾಕ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com