ಕೊನೆಯ ಓವರ್ನಲ್ಲಿ ರೋಚಕ ಆಟ: ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಫೈನಲ್ ಪ್ರವೇಶಿಸಿದ ಕೆಕೆಆರ್

ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಅದ್ಭುತ ಅರ್ಧಶತಕ ಹಾಗೂ ಕೊನೆಯ ಓವರ್ ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ರಾಹುಲ್ ತ್ರಿಪಾಠಿ ಗೆಲುವು ತಂದುಕೊಟ್ಟಿದ್ದು, ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಶುಕ್ರವಾರ ಮೂರು ಬಾರಿ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ನಲ್ಲಿ ಸೆಣೆಸಲಿದೆ. 
ರಾಹುಲ್ ತ್ರಿಪಾಠಿ
ರಾಹುಲ್ ತ್ರಿಪಾಠಿ

ಶಾರ್ಜಾ: ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಅದ್ಭುತ ಅರ್ಧಶತಕ ಹಾಗೂ ಕೊನೆಯ ಓವರ್ ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ರಾಹುಲ್ ತ್ರಿಪಾಠಿ ಗೆಲುವು ತಂದುಕೊಟ್ಟಿದ್ದು, ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಶುಕ್ರವಾರ ಮೂರು ಬಾರಿ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ನಲ್ಲಿ ಸೆಣೆಸಲಿದೆ. 

26 ವರ್ಷದ ಅಯ್ಯರ್ 41 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ ನೆರವಿನಿಂದ 55 ರನ್ ಬಾರಿಸಿ ಮಿಂಚಿದರು. ಅಯ್ಯರ್ ಶುಭಮನ್ ಗಿಲ್ ಜೊತೆ ಆರಂಭಿಕ ವಿಕೆಟ್ ಗೆ 96 ರನ್ ಜೊತೆಯಾಟ ನೀಡಿದರು. ಆದರೆ ಕೆಕೆಆರ್ ಏಳು ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಾಗ ಪಂದ್ಯವು ನಾಟಕೀಯ ತಿರುವು ಪಡೆದುಕೊಂಡಿತು.

ಕೆಕೆಆರ್ 15.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತು. ತದ ನಂತರ ಬ್ಯಾಕ್ ಟು ಬ್ಯಾಕ್ ನಾಲ್ಕು ವಿಕೆಟ್ ಗಳು ಬಿದ್ದವು. ಇದರೊಂದಿಗೆ ಬ್ಯಾಟಿಂಗ್ ಕುಸಿತವನ್ನು ಅನುಭವಿಸಿತು. ಇನ್ನು ಕೊನೆಯ ಎರಡು ಎಸೆತದಲ್ಲಿ 6 ರನ್ ಬೇಕಿತ್ತು. ಈ ವೇಳೆ ರಾಹುಲ್ ತ್ರಿಪಾಠಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 

2012 ಮತ್ತು 2014ರಲ್ಲಿ ಪ್ರಶಸ್ತಿ ಗೆದ್ದ ನಂತರ ಇದು ಕೆಕೆಆರ್ ಅವರ ಮೂರನೇ ಅಂತಿಮ ಪ್ರದರ್ಶನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com