ಏಷ್ಯಾ ಕಪ್ ಕುರಿತಾಗಿ ಐಸಿಸಿ ಸಹ ಬಿಸಿಸಿಐ ಮುಂದೆ ಮಂಡಿಯೂರಿದೆ; ಏನು ಮಾಡಲು ಸಾಧ್ಯವಿಲ್ಲ: ಶಾಹಿದ್ ಅಫ್ರಿದಿ

ಏಷ್ಯಾಕಪ್ ಬಗ್ಗೆ ಪಾಕಿಸ್ತಾನದಿಂದ ನಿರಂತರ ಟೀಕೆಗಳು ಎದುರಾಗುತ್ತಿದ್ದರೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ನಿಲುವಿನಲ್ಲಿ ದೃಢವಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿರ್ಣಾಯಕ ಪಾತ್ರವಹಿಸಬೇಕಾಗಿದೆ.
ಶಾಹಿದ್ ಅಫ್ರಿದಿ
ಶಾಹಿದ್ ಅಫ್ರಿದಿ

ಇಸ್ಲಾಮಾಬಾದ್: ಏಷ್ಯಾಕಪ್ ಬಗ್ಗೆ ಪಾಕಿಸ್ತಾನದಿಂದ ನಿರಂತರ ಟೀಕೆಗಳು ಎದುರಾಗುತ್ತಿದ್ದರೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ನಿಲುವಿನಲ್ಲಿ ದೃಢವಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿರ್ಣಾಯಕ ಪಾತ್ರವಹಿಸಬೇಕಾಗಿದೆ, ಆದರೆ ಐಸಿಸಿಗೂ ಕೂಡ ಬಿಸಿಸಿಐಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಭಾರತ ತಂಡ ಪಾಕಿಸ್ತಾನಕ್ಕೆ ಟೂರ್ನಿ ಆಡಲು ಬರುವುದಿಲ್ಲ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ. ಆದರೆ ಬಿಸಿಸಿಐ ಅದರ ಮಾತಿಗೆ ಬೆಲೆ ನೀಡುತ್ತಿಲ್ಲ. ಏತನ್ಮಧ್ಯೆ, ಶಾಹಿದ್ ಅಫ್ರಿದಿ ಐಸಿಸಿ ಈ ವಿಚಾರವಾಗಿ ಏನನ್ನಾದರೂ ಮಾಡಲೇಬೇಕಿದೆ ಎಂದಿದ್ದಾರೆ.

ಭಾರತ ತನ್ನನ್ನು ತಾನು ಬಲಿಷ್ಠಗೊಳಿಸಿಕೊಂಡಿದೆ!
ಇತ್ತೀಚೆಗೆ, ಪಾಕಿಸ್ತಾನ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಆಯ್ಕೆಗಾರ ಶಾಹಿದ್ ಅಫ್ರಿದಿ ಅವರನ್ನು ಏಷ್ಯಾ ಕಪ್ 2023ರ ಬಗ್ಗೆ ಭಾರತದ ನಿಲುವಿನ ಬಗ್ಗೆ ಸಾಮಾ ಟಿವಿಯಲ್ಲಿ ಕೇಳಿದಾಗ, 'ಯಾರಾದರೂ ತನ್ನ ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗದಿದ್ದರೆ, ಅಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಆದರೆ ಭಾರತ ಅಂತಹ ಕಠಿಣ ನಿಲುವು ತೆಗೆದುಕೊಳ್ಳುತ್ತಿದ್ದರೆ, ಅವರು ತಮ್ಮನ್ನು ತಾವು ಬಲಶಾಲಿಯಾಗಿಸಿಕೊಂಡಿದ್ದಾರೆ. ಆದ್ದರಿಂದ ಅವರು ಈ ರೀತಿ ಮಾತನಾಡಲು ಸಮರ್ಥರಾಗಿದ್ದಾರೆ. ಇಲ್ಲದಿದ್ದರೆ ಅವರಿಗೂ ಧೈರ್ಯವಿರುತ್ತಿರಲಿಲ್ಲ. ಒಟ್ಟಾರೆ ಅಂಶವೆಂದರೆ ನೀವು ನಿಮ್ಮನ್ನು ಬಲಶಾಲಿಯಾಗಿಸಿಕೊಳ್ಳಬೇಕು ಮತ್ತು ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಬಿಸಿಸಿಐ ಮುಂದೆ ಐಸಿಸಿ ಕೂಡ ಏನನ್ನೂ ಮಾಡಲು ಸಾಧ್ಯವಿಲ್ಲ!
ಇನ್ನು ಶಾಹಿದ್ ಅಫ್ರಿದಿ, 'ಭಾರತವು ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಬರಲಿದೆಯೇ ಎಂದು ನನಗೆ ತಿಳಿದಿಲ್ಲ? ಇನ್ನು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ನಾವು ಬಹಿಷ್ಕರಿಸುತ್ತೇವೆಯೇ? ಆದರೆ ನಾವು ಒಂದು ಹಂತದಲ್ಲಿ ಒಂದು ನಿಲುವು ತೆಗೆದುಕೊಳ್ಳಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ ಐಸಿಸಿ ಪಾತ್ರವು ಮುಖ್ಯವಾಗುತ್ತದೆ. ಅವರು ಮುಂದೆ ಬರಬೇಕು, ಆದರೆ ಬಿಸಿಸಿಐ ಮುಂದೆ ಐಸಿಸಿ ಕೂಡ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.

ರವಿಚಂದ್ರನ್ ಅಶ್ವಿನ್ ಹೇಳಿದ್ದೇನು?
ಇತ್ತೀಚೆಗಷ್ಟೇ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಯಬೇಕಿತ್ತು. ಆದರೆ ಪಾಕಿಸ್ತಾನದಲ್ಲಿ ಅದು ನಡೆದರೆ ನಾವು ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತ ಘೋಷಿಸಿದೆ. ನಾವು ಭಾಗವಹಿಸಲು ನೀವು ಬಯಸಿದರೆ ಸ್ಥಳವನ್ನು ಬದಲಾಯಿಸಿ. ಆದರೆ ಇದು ಅನೇಕ ಬಾರಿ ನಡೆಯುವುದನ್ನು ನಾವು ನೋಡಿದ್ದೇವೆ. ಅವರ ಜಾಗಕ್ಕೆ ಹೋಗುವುದಿಲ್ಲ ಎಂದು ಹೇಳಿದಾಗ ಅವರೂ ನಮ್ಮ ಜಾಗಕ್ಕೆ ಬರುವುದಿಲ್ಲ ಎನ್ನುತ್ತಾರೆ. ಅದೇ ರೀತಿ ಪಾಕಿಸ್ತಾನವೂ ವಿಶ್ವಕಪ್‌ಗೆ ಬರುವುದಿಲ್ಲ ಎಂದು ಹೇಳಿದೆ, ಆದರೆ ಅದು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಏಷ್ಯಾ ಕಪ್ ಅನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವುದು ಅಂತಿಮ ನಿರ್ಧಾರವಾಗಿರಬಹುದು. ಅದನ್ನು ಶ್ರೀಲಂಕಾಕ್ಕೆ ಕೊಂಡೊಯ್ದರೆ ನನಗೂ ಸಂತೋಷವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com