
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿದೆ. ಸೂಪರ್ ಓವರ್ನಲ್ಲಿ 12 ರನ್ಗಳ ಅಗತ್ಯವಿದ್ದಾಗ ಡಿಸಿ ಅದನ್ನು ನಾಲ್ಕು ಎಸೆತಗಳಲ್ಲಿಯೇ ಗಳಿಸಿತು. ಆದರೆ, ಆತಿಥೇಯರು ಸ್ವಲ್ಪ ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರೆ ಆ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು. ಕೆಎಲ್ ರಾಹುಲ್ ಉತ್ತಮ ಸ್ಟ್ರೈಕ್-ರೇಟ್ನಲ್ಲಿ ಬ್ಯಾಟಿಂಗ್ ಮಾಡಬೇಕಾಗಿತ್ತು. ಆದರೆ, ಅದು ಹಾಗಾಗಲಿಲ್ಲ. ರಾಹುಲ್ ಕೇವಲ 118 ಸ್ಟ್ರೈಕ್-ರೇಟ್ನೊಂದಿಗೆ 32 ಎಸೆತಗಳಲ್ಲಿ 38 ರನ್ ಗಳಿಸಿದರು. ಡೆಲ್ಲಿಯ ಇತರರಿಗೆ ಹೋಲಿಸಿದರೆ ಅತ್ಯಂತ ಕೆಟ್ಟ ಸ್ಟ್ರೈಕ್ ರೇಟ್ ಆಗಿದೆ. 'ರಾಹುಲ್ ತಮ್ಮ ವಿಕೆಟ್ ಉಳಿಸಿಕೊಳ್ಳಲು ಗಮನ ನೀಡಿದರು. ಇದು ತಂಡದ ಪರವಾಗಿ ಕೆಲಸ ಮಾಡಲಿಲ್ಲ' ಎಂದು ಟೀಂ ಇಂಡಿಯಾದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಡಿಸಿ, 188 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. 'ಹಿರಿಯ ಮತ್ತು ಅನುಭವಿ ಆಟಗಾರನಾಗಿ ಕೆಎಲ್ ರಾಹುಲ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೊದಲು 15-20 ಎಸೆತಗಳನ್ನು ಆಡುವ ಮೂಲಕ ನೆಲೆಗೊಳ್ಳಲು ಯೋಜಿಸಿದ್ದರು. ಆದಾಗ್ಯೂ, ಅವರು ಚೆನ್ನಾಗಿ ಸೆಟ್ ಆದ ನಂತರ ಮತ್ತು ಪಿಚ್ ಮತ್ತು ಪರಿಸ್ಥಿತಿಗಳನ್ನು ತಿಳಿದ ನಂತರ, ಅವರು ಗೇರ್ ಬದಲಾಯಿಸಿ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಾಗಿತ್ತು. ಉತ್ತಮ ಸ್ಥಾನದಲ್ಲಿದ್ದರೂ, ವೇಗವನ್ನು ಹೆಚ್ಚಿಸುವ ಅವಕಾಶದಿಂದ ದೂರ ಉಳಿದರು' ಎಂದು ಪೂಜಾರ ಇಎಸ್ಪಿಎನ್ ಕ್ರಿನ್ಫೊದಲ್ಲಿ ಹೇಳಿದರು.
'ಅವರ ಬ್ಯಾಟಿಂಗ್ ಕ್ರಮಾಂಕವೂ ಸ್ವಲ್ಪ ಬದಲಾಗಿದೆ. ಹೀಗಾಗಿ, ಅವರಿನ್ನು ಹೊಸ ಬ್ಯಾಟಿಂಗ್ ಕ್ರಮಾಂಕಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಪವರ್ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡುತ್ತಾರೆ. ನಂತರ, ಅವರು ನಿಧಾನವಾಗುತ್ತಾರೆ. ರಾಹುಲ್ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸುವ ಬದಲು ತನ್ನ ವಿಕೆಟ್ ಅನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಿದರು ಎಂದು ತೋರುತ್ತದೆ' ಎಂದು ಪೂಜಾರ ಹೇಳಿದರು.
2025ರ ಐಪಿಎಲ್ನಲ್ಲಿ ರಾಹುಲ್
ಮುಂಬೈ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ರಾಹುಲ್ ಕೆಟ್ಟ ಪ್ರದರ್ಶನ ನೀಡಿದರು. ಅಲ್ಲಿ ಅವರು 13 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದರು ಮತ್ತು ಕರ್ಣ್ ಶರ್ಮಾ ಅವರನ್ನು ಔಟ್ ಮಾಡಿದರು. ಈಮಧ್ಯೆ, ಆಡಿರುವ 5 ಪಂದ್ಯಗಳಲ್ಲಿ ಅವರು 59ರ ಸರಾಸರಿಯಲ್ಲಿ ಮತ್ತು 154ರ ಸ್ಟ್ರೈಕ್-ರೇಟ್ನೊಂದಿಗೆ 238 ರನ್ ಗಳಿಸಿದ್ದಾರೆ. ಮಗು ಜನಿಸಿದ ಕಾರಣಕ್ಕಾಗಿ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರು.
Advertisement