4th T20I Match has been called off
ಟಿ20 ಪಂದ್ಯ ರದ್ದು

ತೀವ್ರ ಮಂಜು, ಭಾರತ-ದ.ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯ ರದ್ದು!

ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದರು.
Published on

ಲಖನೌ: ಇಂದು ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ದಟ್ಟ ಮಂಜಿನಿಂದಾಗಿ ರದ್ದಾಗಿದೆ.

ಉತ್ತರ ಪ್ರದೇಶದ ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ 4ನೇ ಟಿ20 ಪಂದ್ಯ ಟಾಸ್ ಕೂಡ ಇಲ್ಲದೇ ದಟ್ಟ ಮಂಜಿನಿಂದಾಗಿ ರದ್ದಾಗಿದೆ.

ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದರು.

ಭಾರೀ ಮಂಜಿನ ಮುಸುಕು ಹಾಗೂ ದಟ್ಟ ಮಂಜು ಮೈದಾನದ ತುಂಬಾ ಹರಡಿದ್ದರಿಂದ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.

4th T20I Match has been called off
ಟೀಂ ಇಂಡಿಯಾಗೆ ಆಘಾತ: ಶುಭ್ ಮನ್ ಗಿಲ್, ಜೈಸ್ವಾಲ್ ಗೆ ಗಾಯ; ಟಿ20 ಸರಣಿಯಿಂದ ಗಿಲ್ ಔಟ್!

ಹೀಗಾಗಿ ಈ ಪಂದ್ಯ ಟಾಸ್ ಕೂಡ ನಡೆಯದೆ ರದ್ದಾಗಿದೆ. ವಾಸ್ತವವಾಗಿ ಪೂರ್ವನಿಗದಿಯಂತೆ ಈ ನಾಲ್ಕನೇ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಬೇಕಿತ್ತು.

ಆ ಬಳಿಕ ಸಂಜೆ 7 ಗಂಟೆಗೆ ಆಟ ಆರಂಭವಾಗಬೇಕಿತ್ತು. ಆದರೆ ರಾತ್ರಿ 9:30 ರವರೆಗೂ ಕಾದರೂ ಮಂಜು ಕಡಿಮೆಯಾಗದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com