ICC Champions Trophy 2025: ''ವೇಳಾಪಟ್ಟಿ ಪಿತೂರಿ''ಯಿಂದ ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ- Ramiz Raja

ಭಾನುವಾರ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿತ್ತು.
Schedule Conspiracy Behind Pakistans Early Elimination
ಪಾಕಿಸ್ತಾನ ಕ್ರಿಕೆಟ್ ತಂಡ
Updated on

ಲಾಹೋರ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾದಿಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ಈ ಬಾರಿ ಪಾಕಿಸ್ತಾನ ತಂಡ ಟೂರ್ನಿಯಿಂದ ಔಟಾಗಿರುವುದಕ್ಕೆ ''ವೇಳಾಪಟ್ಟಿ ಪಿತೂರಿ'' ಕಾರಣ ಎಂಬ ಆರೋಪ ಕೇಳಿಬರುತ್ತಿದೆ.

ಹೌದು.. ಭಾನುವಾರ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿತ್ತು. ಇದಾದ ಬಳಿಕ ಅತ್ತ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶವನ್ನು ಮಣಿಸುವುದರೊಂದಿಗೆ ಪಾಕಿಸ್ತಾನದ ಸೆಮೀಸ್ ಕನಸು ನುಚ್ಚು ನೂರಾಗಿದ್ದು ಇದೀಗ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದಕ್ಕೆ ಪಿತೂರಿ ನಡೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಆರೋಪ ಮಾಡಿರುವುದು ಬೇರಾರು ಅಲ್ಲ..ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಅಧ್ಯಕ್ಷ ರಮೀಜ್ ರಾಜಾ.. ಚಾಂಪಿಯನ್ಸ್ ಟ್ರೋಫಿಯ ಆಯೋಜನೆ ಪಾಕಿಸ್ತಾನದಲ್ಲಿ ಆಗುವ ಕುರಿತು ನಿರ್ಧಾರ ಕೈಗೊಂಡ ಬಳಿಕ ಸಾಕಷ್ಟು ಚಟುವಟಿಕೆಗಳು ನಡೆದಿದ್ದು, ಪ್ರಮುಖವಾಗಿ ವೇಳಾಪಟ್ಟಿ ವಿಚಾರವಾಗಿ ಸಾಕಷ್ಟು ಹಗ್ಗ ಜಗ್ಗಾಟ ನಡೆದಿವೆ. ಇದೇ ವೇಳಾಪಟ್ಟಿ ಪಿತೂರಿಯಿಂದಾಗಿ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ ಎಂದೂ ರಮೀಜ್ ರಾಜಾ ಆರೋಪಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಆರಂಭಿಸಿದರೆ, ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಅಭಿಯಾನ ಆರಂಭಿಸಿತು. ಪಾಕಿಸ್ತಾನ ಬಾಂಗ್ಲಾದೇಶದ ಬದಲು ನ್ಯೂಜಿಲೆಂಡ್ ವಿರುದ್ಧ ಅಭಿಯಾನವನ್ನು ಏಕೆ ಪ್ರಾರಂಭಿಸಿತು. ವೇಳಾಪಟ್ಟಿಯ ಹಿಂದೆ ಪಿತೂರಿ ಏನಾದರೂ ಇದೆಯೇ? ಪಾಕಿಸ್ತಾನವನ್ನು ಆರಂಭದಲ್ಲೇ ಟೂರ್ನಿಯಿಂದ ಹೊರಗಿಡಲು ಇಂತಹ ವೇಳಾಪಟ್ಟಿ ಸಿದ್ಧಪಡಿಸಲಾಯಿತೇ ಎಂದು ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

Schedule Conspiracy Behind Pakistans Early Elimination
ICC Champions Trophy 2025: ಟೂರ್ನಿಯಿಂದ ಪಾಕಿಸ್ತಾನ ಹೊರಕ್ಕೆ; 3 ವರ್ಷಗಳ ಪ್ರಯತ್ನ ನೀರುಪಾಲು, PCBಗೆ ಮತ್ತೆ ಸಂಕಷ್ಟ!

ವೇಳಾಪಟ್ಟಿ ಪಿತೂರಿ ?

"ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಏಕೆ ಆಡಬೇಕಿತ್ತು ಎಂದು ನನಗೆ ಆಶ್ಚರ್ಯವಾಗುತ್ತದೆ. ಅವರು ಬಾಂಗ್ಲಾದೇಶದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಬೇಕಿತ್ತು. ಬಾಂಗ್ಲಾದೇಶ ಬಲಿಷ್ಠ ತಂಡವಾಗಿದ್ದರೂ, ಅದು ಅವರಿಗೆ ಇನ್ನೂ ತುಲನಾತ್ಮಕವಾಗಿ ಸುಲಭವಾದ ಪಂದ್ಯವಾಗಿತ್ತು. ಬಾಂಗ್ಲಾದೇಶವನ್ನು ಮೊದಲು ಆಡುವುದರಿಂದ ನ್ಯೂಜಿಲೆಂಡ್ ಆರಂಭಿಕ ಲಾಭವನ್ನು ಪಡೆಯಲು ಅವಕಾಶ ನೀಡುವ ಬದಲು ಗ್ರೂಪ್ ಎ ನಲ್ಲಿರುವ ಪ್ರತಿಯೊಂದು ತಂಡಕ್ಕೂ ಸಮಾನ ಒತ್ತಡ ಬೀಳುತ್ತಿತ್ತು. ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನದ ಸೋಲು ತಂಡದ ಮೇಲೆ ಒತ್ತಡ ಹೇರಿತು, ಇದು ಭಾರತದ ವಿರುದ್ಧದ ಸೋಲಿನಿಂದ ಇನ್ನಷ್ಟು ಉಲ್ಬಣಗೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳ ಭರ್ಜರಿ ಸೋಲಿಗೆ ಶರಣಾದ ನಂತರ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಅವರ ಹೈ-ಆಕ್ಟೇನ್ ಪಂದ್ಯದ ಮಹತ್ವ ಹೊಸ ಮಟ್ಟಕ್ಕೆ ಏರಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತನ್ನ ಭವಿಷ್ಯವನ್ನು ಉಳಿಸಿಕೊಳ್ಳಲು ಗೆಲುವು ಏಕೈಕ ಮಾರ್ಗವಾಗಿತ್ತು ಎಂದು ಹೇಳಿದ್ದಾರೆ.

Schedule Conspiracy Behind Pakistans Early Elimination
ICC Champions Trophy 2025: ''ಅವರನ್ಯಾಕೆ..?''; ಟೀಂ ಇಂಡಿಯಾ ಬೆಂಚ್ ಸ್ಟ್ರೆಂತ್ ಬಳಕೆ ಬಗ್ಗೆ Sunil Gavaskar ಮಾತು

"ಅವರು ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದರು ಮತ್ತು ಸೋತರು. ಈ ಸೋಲು ಪಾಕಿಸ್ತಾನದ ಮೇಲೆ ಒತ್ತಡವನ್ನು ಸೃಷ್ಟಿಸಿತು. ಪಾಕಿಸ್ತಾನ ಬಾಂಗ್ಲಾದೇಶ ಅಥವಾ ಭಾರತದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಏಕೆ ಆಡಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಅದು ಸಂಭವಿಸಿದಲ್ಲಿ, ಒತ್ತಡವು ಸಮಾನವಾಗಿರುತ್ತಿತ್ತು. ಹೈ-ವೋಲ್ಟೇಜ್ ಘರ್ಷಣೆಯಲ್ಲಿ, ಪಾಕಿಸ್ತಾನದ ಪ್ರಶಸ್ತಿ ರಕ್ಷಣೆ ಅಪಾಯಕ್ಕೆ ಸಿಲುಕಿದ ಹಿಂದಿನ ಮಾಸ್ಟರ್ ಮೈಂಡ್ ವಿರಾಟ್ ಕೊಹ್ಲಿ. ಆಗಾಗ್ಗೆ 'ಚೇಸ್ ಮಾಸ್ಟರ್' ಎಂದು ಪರಿಗಣಿಸಲ್ಪಟ್ಟ ವಿರಾಟ್, ಪಾಕಿಸ್ತಾನವು ತಮ್ಮ ತಂತ್ರವನ್ನು ಕಾರ್ಯಗತಗೊಳಿಸಿದ ನಂತರವೂ ಜಯಿಸಲು ಸಾಧ್ಯವಾಗದ ಅಡಚಣೆಯಾಗಿದೆ ಎಂದು ಸಾಬೀತಾಯಿತು ಎಂದು ಹೇಳಿದ್ದಾರೆ.

"ವಿರಾಟ್ ಅವರ ಬ್ಯಾಟಿಂಗ್ ಎಲ್ಲವನ್ನೂ ಹೊಂದಿತ್ತು. ಶಾಂತತೆ ಮತ್ತು ಆಕ್ರಮಣಶೀಲತೆ ಇತ್ತು. ಅವರು ವೇಗವನ್ನು ಚೆನ್ನಾಗಿ ಕಾಯ್ದುಕೊಂಡರು. ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಸಂಪೂರ್ಣ ಪ್ಯಾಕೇಜ್ ಆಗಿದ್ದರು. ಅವರು ತಮ್ಮನ್ನು ತಾವು ಸವಾಲು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರು ಪ್ರತಿಯೊಬ್ಬ ಬೌಲರ್ ವಿರುದ್ಧವೂ ಆತ್ಮವಿಶ್ವಾಸದಿಂದ ಆಡಿದರು ಮತ್ತು ಯಾರಿಗೂ ನೆಲೆಗೊಳ್ಳಲು ಅವಕಾಶ ನೀಡಲಿಲ್ಲ" ಎಂದು ರಮೀಜ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com