Champions Trophy 2025: ಇದು ಆತ್ಮಾಹುತಿ ದಾಳಿಯ ಸಂಚಾ? ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ರಚಿನ್ ತಬ್ಬಿಕೊಂಡ 'ಉಗ್ರ', Video

ಮೈದಾನಕ್ಕೆ ಪ್ರವೇಶಿಸಿದ ಪ್ರೇಕ್ಷಕ ನಿಷೇಧಿತ ಇಸ್ಲಾಮಿಸ್ಟ್ ಪಕ್ಷವಾದ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (TLP) ನ ಬೆಂಬಲಿಗರಾಗಿದ್ದನು. 2021ರಲ್ಲಿ, ಪಾಕಿಸ್ತಾನ ಸರ್ಕಾರ TLP ಅನ್ನು ನಿಷೇಧಿಸಿತು.
ರಚಿನ್ ತಬ್ಬಿಕೊಂಡ ಉಗ್ರ
ರಚಿನ್ ತಬ್ಬಿಕೊಂಡ ಉಗ್ರ
Updated on

ರಾವಲ್ಪಿಂಡಿ: ಪಾಕಿಸ್ತಾನ ಆಯೋಜಿಸುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭದ್ರತೆ ವಿಚಾರ ಹೆಚ್ಚು ಆತಂಕ ಮೂಡಿಸುತ್ತಿದೆ. ಭದ್ರತಾ ಕಾರಣಗಳಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸಕ್ಕೆ ಅನುಮತಿ ನಿರಾಕರಿಸಿತ್ತು. ಅದಕ್ಕಾಗಿಯೇ ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ. ಏತನ್ಮಧ್ಯೆ, ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯ ನಡೆಯಿತು. ಆಗ ಓರ್ವ ಭಯೋತ್ಪಾದಕ ಪ್ರೇಕ್ಷಕನಾಗಿ ಕ್ರೀಡಾಂಗಣಕ್ಕೆ ಬಂದಿದ್ದನು. ಇದಾದ ನಂತರ, ವಿಷಯಗಳು ಎಷ್ಟರ ಮಟ್ಟಿಗೆ ಮುಂದುವರೆದವೆಂದರೆ, ಭಯೋತ್ಪಾದಕನು ಮೈದಾನಕ್ಕೆ ಬಂದು ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಅವರನ್ನು ಬಲವಂತವಾಗಿ ತಬ್ಬಿಕೊಂಡಿದ್ದನು. ಈ ಘಟನೆ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯನ್ನು ಬಯಲು ಮಾಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಮೈದಾನಕ್ಕೆ ಬಂದ ವ್ಯಕ್ತಿ ಇಸ್ಲಾಮಿಕ್ ಪಕ್ಷ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನದ ಬೆಂಬಲಿಗರಾಗಿದ್ದಾನೆ. ಈ ಘಟನೆಯ ನಂತರ, ಪಾಕಿಸ್ತಾನದಲ್ಲಿರುವ ಆಟಗಾರರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದು ಪಾಕಿಸ್ತಾನದ ಭದ್ರತಾ ವ್ಯವಸ್ಥೆಯೇ ಎಂದು ಎಲ್ಲರೂ ಕೇಳುತ್ತಿದ್ದಾರೆ. 2009ರಲ್ಲಿ ಪಾಕಿಸ್ತಾನಕ್ಕೆ ಬಂದಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಹಲವು ಆಟಗಾರರು ಗಾಯಗೊಂಡಿದ್ದರು. ಈ ನಂತರ ಹಲವು ವಿದೇಶಿ ತಂಡಗಳು ಪಾಕಿಸ್ತಾನದ ಸರಣಿಗಳನ್ನು ನಿಲ್ಲಿಸಿದ್ದವು.

ಮೈದಾನಕ್ಕೆ ಪ್ರವೇಶಿಸಿದ ಪ್ರೇಕ್ಷಕ ನಿಷೇಧಿತ ಇಸ್ಲಾಮಿಸ್ಟ್ ಪಕ್ಷವಾದ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (TLP) ನ ಬೆಂಬಲಿಗರಾಗಿದ್ದನು. 2021ರಲ್ಲಿ, ಪಾಕಿಸ್ತಾನ ಸರ್ಕಾರ TLP ಅನ್ನು ನಿಷೇಧಿಸಿತು. ಟಿಎಲ್‌ಪಿ ಉಗ್ರ ಸಾದ್ ರಿಜ್ವಿ ಮೈದಾನಕ್ಕೆ ಬಂದು ರಚಿನ್ ಅವರನ್ನು ತಬ್ಬಿಕೊಂಡು ನಂತರ ಮೈದಾನದಲ್ಲಿ ಫೋಟೋವೊಂದನ್ನು ಪ್ರದರ್ಶಿಸಿದನು. ಭದ್ರತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಪ್ರೇಕ್ಷಕನನ್ನು ಮೈದಾನದಿಂದ ಹೊರ ಕರೆದೊಯ್ದರು. ಈ ಘಟನೆಯು ರಚಿನ್ ರವೀಂದ್ರ ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ತಮ್ಮ ಇನ್ನಿಂಗ್ಸ್ ಆಡುವುದನ್ನು ಮುಂದುವರೆಸಿದರು. ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಭಯೋತ್ಪಾದಕರ ಈ ಕೃತ್ಯವು ರಚಿನ್ ಸೇರಿದಂತೆ ಅನೇಕ ಆಟಗಾರರಲ್ಲಿ ಸುರಕ್ಷತೆಯ ಬಗ್ಗೆ ಭಯವನ್ನು ಸೃಷ್ಟಿಸಿದೆ. ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ: ಇದು ಪಾಕಿಸ್ತಾನದ ಭದ್ರತಾ ವ್ಯವಸ್ಥೆಯೇ?

ರಚಿನ್ ತಬ್ಬಿಕೊಂಡ ಉಗ್ರ
CT2025: ಭಾರತ ಅಮೋಘ ಗೆಲುವು ಬೆನ್ನಲ್ಲೇ Pak ಪ್ರೇಮಿಯ ಅಂಗಡಿ ಮೇಲೆ ಬುಲ್ಡೋಜರ್ ನುಗ್ಗಿಸಿದ 'ಮಹಾ' ಸರ್ಕಾರ, Video!

ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಡಿಯಲ್ಲಿ ಇನ್ನೂ ಸುಮಾರು 10 ಪಂದ್ಯಗಳು ನಡೆಯಬೇಕಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ಮುಖ್ಯಸ್ಥ ಅಬ್ದುಲ್ ಖಾದಿರ್ ಮು'ಮಿನ್ ಅವರ ಪಾಕಿಸ್ತಾನ ಭೇಟಿಗೂ ಈ ಘಟನೆಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನಿ ಭದ್ರತಾ ಪಡೆಗಳು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಹೇಳಿಕೊಂಡಿವೆ. ಮತ್ತೊಂದೆಡೆ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಭಯೋತ್ಪಾದಕ ಬೆದರಿಕೆಯ ಬಗ್ಗೆ ಪಾಕಿಸ್ತಾನಿ ಗುಪ್ತಚರ ಬ್ಯೂರೋ ಎಚ್ಚರಿಕೆ ನೀಡಿದೆ. ಗುಪ್ತಚರ ಮಾಹಿತಿಯ ಪ್ರಕಾರ, ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ISIS-K) ವಿದೇಶಿ ಪ್ರಜೆಗಳನ್ನು ಅಪಹರಿಸಲು ಯೋಜಿಸುತ್ತಿದೆ. ಈ ಸಂಘಟನೆಯು ಟೂರ್ನಮೆಂಟ್ ವೀಕ್ಷಿಸಲು ಬರುವ ವಿದೇಶಿ ಪ್ರೇಕ್ಷಕರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡಬಹುದು. ಮಾಧ್ಯಮ ವರದಿಗಳ ಪ್ರಕಾರ, ಐಸಿಸ್-ಕೆ ಸದಸ್ಯರು ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ಬಂದರುಗಳು ಹಾಗೂ ವಿದೇಶಿ ಪ್ರಜೆಗಳು ನಿರಂತರವಾಗಿ ಬಂದು ಹೋಗುವ ವಸತಿ ಸ್ಥಳಗಳ ಮೇಲೆ ಕಣ್ಣಿಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com