'IPL 2026 ಆವೃತ್ತಿ ಕಠಿಣವಾಗಿರುತ್ತದೆ': ವೈಭವ್ ಸೂರ್ಯವಂಶಿಗೆ ಭಾರತದ ಮಾಜಿ ಆಟಗಾರ ಶಿಖರ್ ಧವನ್

ವೈಭವ್ ಸೂರ್ಯವಂಶಿ ಆರಂಭಿಕ ಯಶಸ್ಸನ್ನು ಅನುಭವಿಸುತ್ತಿರುವುದರಿಂದ, ಈಗ ಸಿಕ್ಕಿರುವ ಖ್ಯಾತಿ, ಹಣ ಅಥವಾ ಹೆಚ್ಚಿನ ಮಾನ್ಯತೆಯು ಅವರ ಗಮನವನ್ನು ಬೇರೆಡೆಗೆ ತಿರುಗಿಸದಂತೆ ನೋಡಿಕೊಳ್ಳಬೇಕು ಎಂದರು.
Shikhar Dhawan
ಶಿಖರ್ ಧವನ್
Updated on

ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಐಪಿಎಲ್ ಸ್ಟಾರ್ ವೈಭವ್ ಸೂರ್ಯವಂಶಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಬಿಹಾರದ 14 ವರ್ಷದ ಬ್ಯಾಟರ್ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಐಪಿಎಲ್ 2025ರ ಮೆಗಾ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 1.1 ಕೋಟಿ ರೂ.ಗೆ ಖರೀದಿಸಿತ್ತು. ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದರು. ವಿಶ್ವದ ಕೆಲವು ಪ್ರಮುಖ ಬೌಲರ್‌ಗಳ ವಿರುದ್ಧವೇ ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಎಲ್ಲರ ಗಮನ ಸೆಳೆಯಿತು.

ವೈಭವ್ ಸೂರ್ಯವಂಶಿ ಆರಂಭಿಕ ಯಶಸ್ಸನ್ನು ಅನುಭವಿಸುತ್ತಿರುವುದರಿಂದ, ಈಗ ಸಿಕ್ಕಿರುವ ಖ್ಯಾತಿ, ಹಣ ಅಥವಾ ಹೆಚ್ಚಿನ ಮಾನ್ಯತೆಯು ಅವರ ಗಮನವನ್ನು ಬೇರೆಡೆಗೆ ತಿರುಗಿಸದಂತೆ ಅಥವಾ ತಮ್ಮ ಆಟದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವಂತೆ ಶಿಖರ್ ಧವನ್ ಎಚ್ಚರಿಕೆ ನೀಡಿದ್ದಾರೆ.

'ಆತನ ವಯಸ್ಸು 13-14? 14ನೇ ವಯಸ್ಸಿನಲ್ಲಿ, ಅವರು ಬೌಲರ್‌ಗಳನ್ನು ಬಾರಿಸುವ ಮತ್ತು ವಿಶ್ವ ಕ್ರಿಕೆಟ್‌ನ ದೊಡ್ಡವರ ಮುಂದೆ ನಿಂತಿರುವ ರೀತಿ ಗಮನಾರ್ಹವಾಗಿದೆ. ದೊಡ್ಡ ಹೊಡೆತಗಳನ್ನು ಹೊಡೆಯುವಾಗ ಅವರ ಆತ್ಮವಿಶ್ವಾಸ ಅದ್ಭುತವಾಗಿದೆ. ಐಪಿಎಲ್‌ಗೆ ಧನ್ಯವಾದಗಳು, ನಮ್ಮ ಮಕ್ಕಳು ಈಗ 5 ನೇ ವಯಸ್ಸಿನಿಂದ ದೊಡ್ಡ ತಂಡಕ್ಕೆ ಸೇರುವ ಕನಸು ಕಾಣಬಹುದಾಗಿದೆ. ವೈಭವ್ ಆ ಕನಸನ್ನು ನನಸು ಮಾಡಿಕೊಂಡರು. ಅವರಿಗೆ ಮತ್ತು ಅವರ ಕುಟುಂಬಕ್ಕೆ ದೊಡ್ಡ ಅಭಿನಂದನೆಗಳು. ಕ್ರಿಕೆಟ್‌ನಲ್ಲಿ ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. 14 ವರ್ಷದ ಮಗು ಅಂತಹ ದೊಡ್ಡ ಲೀಗ್ ಅನ್ನು ಆಡುವುದು ಮತ್ತು ಪ್ರಾಬಲ್ಯ ಸಾಧಿಸುವುದು ಯೋಚಿಸಲಾಗದು' ಎಂದರು.

'ಅವರಿಗೆ ದೊರಕುವ ಖ್ಯಾತಿ, ಮನ್ನಣೆ ಮತ್ತು ಹಣವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಸವಾಲಾಗಿದೆ. ಅವರ ವಿಚಾರದಲ್ಲಿ ಉಂಟಾದ ದೊಡ್ಡ ವಿಚಾರವೆಂದರೆ, ಅವರು ರಾಹುಲ್ ಭಾಯ್, ವಿಕ್ರಮ್ ಪಾಜಿ (ರಾಜಸ್ಥಾನ್ ರಾಯಲ್ಸ್‌ನ ಕೋಚ್‌ಗಳು) ಅವರಂತಹ ತುಂಬಾ ಒಳ್ಳೆಯ ಕ್ರಿಕೆಟಿಗರ ಅಡಿಯಲ್ಲಿದ್ದಾರೆ. ಅವರು ಉತ್ತಮ ಕ್ರಿಕೆಟಿಗರನ್ನು ರೂಪಿಸುವುದು ಮಾತ್ರವಲ್ಲದೆ, ಉತ್ತಮ ಮನುಷ್ಯರನ್ನಾಗಿಯೂ ಮಾಡುತ್ತಾರೆ' ಎಂದು ಹೇಳಿದರು.

ವೈಭವ್ ಅವರನ್ನು ಎದುರಿಸುವುದು ಹೇಗೆಂದು ಬೌಲರ್‌ಗಳು ಸಿದ್ಧವಾಗುವುದರಿಂದ ಐಪಿಎಲ್ 2026ನೇ ಆವೃತ್ತಿ ಸೂರ್ಯವಂಶಿಗೆ ಕಠಿಣವಾಗಿರುತ್ತದೆ ಎಂದು ಮಾಜಿ ಪಂಜಾಬ್ ಕಿಂಗ್ಸ್ ನಾಯಕ ಹೇಳಿದ್ದಾರೆ.

'ಎರಡನೇ ವರ್ಷ ಅವರಿಗೆ ಸ್ವಲ್ಪ ಕಠಿಣವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಬೌಲರ್‌ಗಳು ಅವನ ಸಾಮರ್ಥ್ಯ ಏನೆಂದು ತಿಳಿದಿರುತ್ತಾರೆ. ಅವರು ಆತನನ್ನು ಹೇಗೆ ಎದುರಿಸಬೇಕೆಂದು ಉತ್ತಮವಾಗಿ ಯೋಜಿಸಲಿದ್ದಾರೆ. ಅವರು ಆ ಸವಾಲುಗಳನ್ನು ಎದುರಿಸಿ ಬೆಳೆಯಬೇಕು' ಎಂದು ಧವನ್ ಹೇಳಿದರು.

'ಅಲ್ಲದೆ, ಆತ ತನ್ನ ಮಾನಸಿಕ ಆರೋಗ್ಯವನ್ನು ಹೇಗೆ ಕಾಳಜಿ ವಹಿಸುತ್ತಾನೆ ಎಂಬುದು ಮುಂದೆ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ, ನಿರೀಕ್ಷೆಗಳು ಹೆಚ್ಚಾಗುತ್ತವೆ. ಸ್ವಯಂ-ನಿರೀಕ್ಷೆಯೂ ಹೆಚ್ಚಾಗುತ್ತದೆ. ಅವನು ಹೇಗೆ ಎಲ್ಲ ವಿಷಯವನ್ನು ನಿಭಾಯಿಸುತ್ತಾನೆ ಎಂಬುದನ್ನು ನಾನು ನೋಡಲು ಎದುರು ನೋಡುತ್ತಿದ್ದೇನೆ' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com