England-India Test Series: ಕೋಚ್ ಗೌತಮ್ ಗಂಭೀರ್, ಓವಲ್ ಕ್ಯುರೇಟರ್ ನಡುವೆ ಮಾತಿನ ಚಕಮಕಿ!

ಅಭ್ಯಾಸದ ವೇಳೆ ಗಂಭೀರ್, ಕ್ಯುರೇಟರ್ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ.
Gautam Gambhir and Oval curator Lee Fortis involve in heated exchange of words.
ಮಾತಿನ ಚಕಮಕಿಯಲ್ಲಿ ತೊಡಗಿದ ಗೌತಮ್ ಗಂಭೀರ್ ಮತ್ತು ಓವಲ್ ಕ್ಯುರೇಟರ್ ಲೀ ಫೋರ್ಟೀಸ್.
Updated on

ಲಂಡನ್: ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮಂಗಳವಾರ ಓವಲ್‌ನ ಮುಖ್ಯ ಕ್ಯುರೇಟರ್ ಲೀ ಫೋರ್ಟಿಸ್ ಅವರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದರು ಮತ್ತು ಮೈದಾನ ಸಿಬ್ಬಂದಿಯತ್ತ ಬೆರಳು ತೋರಿಸುತ್ತಾ, 'ನಾವು ಏನು ಮಾಡಬೇಕೆಂದು ನೀವು ನಮಗೆ ಹೇಳುವ ಅಗತ್ಯವಿಲ್ಲ' ಎಂದು ಹೇಳುತ್ತಿರುವುದು ಕೇಳಿಬಂತು.

ಗುರುವಾರದಿಂದ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಮ್ಯಾಂಚೆಸ್ಟರ್‌ನಲ್ಲಿ ನಾಲ್ಕನೇ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ಭಾರತ ತಂಡವು ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

ಅಭ್ಯಾಸದ ವೇಳೆ ಗಂಭೀರ್ ಕ್ಯುರೇಟರ್ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಫೋರ್ಟಿಸ್ ಗಂಭೀರ್ ಅವರಿಗೆ 'ನಾನು ಇದನ್ನು ವರದಿ ಮಾಡಬೇಕು' ಎಂದಾಗ ಗಲಾಟೆ ಆರಂಭವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ಕೋಚ್ 'ನೀವು ಏನು ವರದಿ ಮಾಡಬೇಕೋ ಅದನ್ನು ವರದಿ ಮಾಡಿ' ಎಂದು ಕಟುವಾಗಿ ಉತ್ತರಿಸಿದ್ದಾರೆ.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕೊಟಕ್, ಆ ಕ್ಯುರೇಟರ್ ಅನ್ನು ಪಕ್ಕಕ್ಕೆ ಕರೆದೊಯ್ದು, 'ನಾವು ಯಾವುದಕ್ಕೂ ಹಾನಿ ಮಾಡುವುದಿಲ್ಲ' ಎಂದರು.

ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಅವರಂತಹ ಇತರ ಭಾರತೀಯ ಸಹಾಯಕ ಸಿಬ್ಬಂದಿ ಇದನ್ನು ಕುತೂಹಲದಿಂದ ನೋಡುತ್ತಿರುವುದು ಕಂಡುಬಂತು.

ಇಬ್ಬರೂ ಏಕೆ ವಾಗ್ವಾದಕ್ಕಿಳಿದರು ಎಂಬುದು ಸ್ಪಷ್ಟವಾಗಿಲ್ಲವಾದರೂ, ಗಂಭೀರ್ ಮತ್ತು ಫೋರ್ಟಿಸ್ ಅಭ್ಯಾಸಕ್ಕಾಗಿ ಪಿಚ್‌ಗಳ ಪರಿಸ್ಥಿತಿಗಳ ಕುರಿತು ವಾದಿಸುತ್ತಿರುವಂತೆ ಕಂಡುಬಂತು.

'ನಾವು ಏನು ಮಾಡಬೇಕೆಂದು ನೀವು ನಮಗೆ ಹೇಳಲು ಸಾಧ್ಯವಿಲ್ಲ. ನೀವು ಮೈದಾನದ ಸಿಬ್ಬಂದಿಗಳಲ್ಲಿ ಒಬ್ಬರು, ಅದಕ್ಕಿಂತ ಹೆಚ್ಚಿನದೇನೂ ಇಲ್ಲ' ಎಂದು ಗಂಭೀರ್ ಫೋರ್ಟಿಸ್‌ಗೆ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಫೋರ್ಟಿಸ್ ತಮ್ಮ ಕೆಲಸದಲ್ಲಿ ನಿರತರಾದರು ಮತ್ತು ಗಂಭೀರ್ ನೆಟ್ ಸೆಷನ್ ಮೇಲ್ವಿಚಾರಣೆ ಮಾಡಲು ಹಿಂತಿರುಗಿದರು.

ನಂತರ ಮೈದಾನದಿಂದ ತನ್ನ ಕೋಣೆಗೆ ನಡೆದುಕೊಂಡು ಹೋಗುತ್ತಿದ್ದಾಗ ಫೋರ್ಟಿಸ್, 'ಇದು ಒಂದು ದೊಡ್ಡ ಆಟ ಮತ್ತು ಅವರು (ಗಂಭೀರ್) ಸ್ವಲ್ಪ ಕೋಪಗೊಂಡರು' ಎಂದು ಹೇಳಿದರು.

ಈಮಧ್ಯೆ, ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅರ್ಧಶತಕ ಮತ್ತು ಶೂನ್ಯಕ್ಕೆ ನಿರ್ಗಮಿಸಿದ ಸಾಯಿ ಸುದರ್ಶನ್ ಅಭ್ಯಾಸಕ್ಕಾಗಿ ಸ್ಥಳಕ್ಕೆ ಬಂದ ಮೊದಲ ವ್ಯಕ್ತಿಯಾಗಿದ್ದರು. ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಅಭ್ಯಾಸ ನಡೆಸುತ್ತಿದ್ದರು. ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೂಡ ಮಾರ್ಕೆಲ್ ಅವರ ಕಣ್ಗಾವಲಿನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com