Test Cricket ಸಹವಾಸವೇ ಬೇಡ...: ಮಿಸ್ಟರಿ ಸ್ಪಿನ್ನರ್ Varun Chakravarthy ಹೀಗೆ ಹೇಳಿದ್ದು ಯಾಕೆ?

3 ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ 9 ವಿಕೆಟ್ ಗಳನ್ನು ಗಳಿಸಿದ್ದು, ಇದು ನ್ಯೂಜಿಲ್ಯಾಂಡ್ ನ ಮ್ಯಾಟ್ ಹೆನ್ರಿ (Matt Henry) ನಂತರದ 2ನೇ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ.
varun chakravarthy
ವರುಣ್ ಚಕ್ರವರ್ತಿonline desk
Updated on

ದುಬೈ ನಲ್ಲಿ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಸ್ಟರಿ ಸ್ಪಿನ್ನರ್ Varun Chakravarthy ಸಂದರ್ಶನವೊಂದರಲ್ಲಿ ತಮ್ಮ ಕ್ರಿಕೆಟ್ ಆಸಕ್ತಿಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

3 ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ 9 ವಿಕೆಟ್ ಗಳನ್ನು ಗಳಿಸಿದ್ದು, ಇದು ನ್ಯೂಜಿಲ್ಯಾಂಡ್ ನ ಮ್ಯಾಟ್ ಹೆನ್ರಿ (Matt Henry) ನಂತರದ 2ನೇ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ. ವರುಣ್ ಚಕ್ರವರ್ತಿ ತಮ್ಮ ಕ್ರಿಕೆಟ್ ಆಸಕ್ತಿಗಳ ಬಗ್ಗೆ ಹೇಳುತ್ತಾ. ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಮಾತನಾಡಿದ್ದಾರೆ.

ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಹೇಳಿದ್ದರೂ, ಒಂದು ದಿನದ ಪಂದ್ಯದಲ್ಲಿ 20 ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ಮಾಡುವ ಕಠಿಣತೆಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಟೆಸ್ಟ್ ಕ್ರಿಕೆಟ್ ಸಹವಾಸವೇ ಬೇಡ ಎಂದು ವರುಣ್ ಚಕ್ರವರ್ತಿ ಒಪ್ಪಿಕೊಂಡಿದ್ದಾರೆ.

"ನನಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ, ಆದರೆ ನನ್ನ ಬೌಲಿಂಗ್ ಶೈಲಿ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೆಯಾಗುವುದಿಲ್ಲ" ಎಂದು ಚರವರ್ತಿ ಗೋಬಿನಾಥ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಚಕ್ರವರ್ತಿ ತಮ್ಮ ಬೌಲಿಂಗ್ ಶೈಲಿಯಿಂದಾಗಿ, ಅವರು ಪ್ರಸ್ತುತ ಬಿಳಿ ಚೆಂಡಿನ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಲು ಬಯಸುತ್ತಾರೆ ಎಂದು ಸೂಚಿಸಿದರು.

"ನನ್ನದು ಬಹುತೇಕ ಮಧ್ಯಮ ವೇಗದ ಬೌಲಿಂಗ್‌ನಂತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ನೀವು ನಿರಂತರವಾಗಿ 20-30 ಓವರ್‌ಗಳನ್ನು ಬೌಲಿಂಗ್ ಮಾಡಬೇಕು. ನನ್ನ ಬೌಲಿಂಗ್‌ನಲ್ಲಿ ನಾನು ಹಾಗೆ ಮಾಡಲು ಸಾಧ್ಯವಿಲ್ಲ. ನಾನು ವೇಗವಾಗಿ ಬೌಲಿಂಗ್ ಮಾಡುವುದರಿಂದ, ನಾನು ಗರಿಷ್ಠ 10-15 ಓವರ್‌ಗಳನ್ನು ಬೌಲ್ ಮಾಡಬಹುದು, ಅದು ಟೆಸ್ಟ್ ಫಾರ್ಮೆಟ್ ಗೆ ಸೂಕ್ತವಲ್ಲ. ನಾನು ಇದೀಗ ಟಿ20 ಮತ್ತು ಒಡಿಐ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

varun chakravarthy
ಭಾರತಕ್ಕೆ ಬರಬೇಡಿ....: ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳ ಬಗ್ಗೆ ಕನ್ನಡಿಗ ವರುಣ್ ಚಕ್ರವರ್ತಿ ಮಾತು

ಸ್ಪಿನ್ನರ್‌ ಆಗಿ ತಾನು ಏಕೆ ಪರಿವರ್ತನೆ ಹೊಂದಿದ್ದು ಎಂಬುದನ್ನು ವಿವರಿಸಿದ ವರುಣ್ ಚಕ್ರವರ್ತಿ, ತಮಿಳುನಾಡಿನ ಟ್ರ್ಯಾಕ್‌ಗಳು ವೇಗಿಗಳಿಗೆ ಹೆಚ್ಚಿನದನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

"ನಾನು ಪೇಸ್ ಬೌಲಿಂಗ್ ಮಾಡಿದ್ದರೆ ನಾನು ಅಲ್ಲಿಯೇ ಸಿಲುಕಿಕೊಳ್ಳುತ್ತಿದ್ದೆ. ತುಂಬಾ ವೇಗಿಗಳಿದ್ದಾರೆ. ಅಲ್ಲದೆ, ತಮಿಳುನಾಡಿನ ವಿಕೆಟ್‌ಗಳಲ್ಲಿ ಅದು ಸ್ವಿಂಗ್ ಆಗುವುದಿಲ್ಲ. ಅವು ಸ್ಪಿನ್ ಸ್ನೇಹಿ ವಿಕೆಟ್‌ಗಳು. ಆದ್ದರಿಂದ ನೀವು ತಮಿಳುನಾಡಿನಿಂದ ಹೆಚ್ಚಿನ ವೇಗದ ಬೌಲರ್‌ಗಳನ್ನು ನೋಡಲು ಸಾಧ್ಯವಿಲ್ಲ. ಇದು ಬಹಳ ಅಪರೂಪ. ಬಾಲಾಜಿ ಮತ್ತು ನಟರಾಜನ್ ಇದ್ದಾರೆ ಆದರೆ ಇತರ ರಾಜ್ಯಗಳಲ್ಲಿ ಅನೇಕ ವೇಗಿಗಳಿದ್ದಾರೆ. ನಾನು ವೇಗದ ಬೌಲಿಂಗ್ ನ್ನು ತೊರೆದಿದ್ದಕ್ಕೆ ನನಗೆ ಸಂತೋಷವಾಗಿದೆ. (ರವಿಚಂದ್ರನ್) ಅಶ್ವಿನ್ ಕೂಡ ವೇಗದ ಬೌಲಿಂಗ್ ನ್ನು ತೊರೆದ ನಂತರ ಸ್ಪಿನ್ನರ್ ಆದರು. ಆದ್ದರಿಂದ ನಾನು ಸಂತೋಷವಾಗಿದ್ದೇನೆ" ಎಂದು ಚರವರ್ತಿ ವಿವರಿಸಿದರು.

ಚಕ್ರವರ್ತಿ ಈಗ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಪರವಾಗಿ ಆಡಲಿದ್ದಾರೆ. ಅವರು ಮಾರ್ಚ್ 22 ರ ಶನಿವಾರದಂದು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಯನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com