Ranji Trophy: ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಮೇಲೆ ಕಣ್ಣು; ರಜತ್ ಪಾಟೀದಾರ್ ತಂಡ ಎದುರಿಸಲು ರವೀಂದ್ರ ಜಡೇಜಾ ಸಜ್ಜು

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದಿಂದ ಕೈಬಿಟ್ಟ ರವೀಂದ್ರ ಜಡೇಜಾ ಇದೀಗ ಲಭ್ಯವಿದ್ದಾರೆ.
Ravindra Jadeja
ರವೀಂದ್ರ ಜಡೇಜಾ
Updated on

ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ರವೀಂದ್ರ ಜಡೇಜಾ, ಅಕ್ಟೋಬರ್ 25 ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ರಜತ್ ಪಾಟಿದಾರ್ ನೇತೃತ್ವದ ಮಧ್ಯಪ್ರದೇಶ ವಿರುದ್ಧದ ಮುಂದಿನ ಪಂದ್ಯಕ್ಕೆ ಸೌರಾಷ್ಟ್ರ ಪರ ಆಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದಿಂದ ಕೈಬಿಟ್ಟ ರವೀಂದ್ರ ಜಡೇಜಾ ಇದೀಗ ಲಭ್ಯವಿದ್ದಾರೆ. ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ.

ಕುತೂಹಲಕಾರಿ ವಿಚಾರ ಎಂದರೆ, ಜಡೇಜಾ ಅವರನ್ನು ಸೌರಾಷ್ಟ್ರದ ನಾಯಕನಾಗಿ ಆಯ್ಕೆ ಮಾಡಿಲ್ಲ. ಜಯದೇವ್ ಉನಾದ್ಕಟ್ ನಾಯಕತ್ವದಲ್ಲಿ ಅವರು ಮುಂದುವರೆದಿದ್ದಾರೆ. ಗಾಯದ ಕಾರಣದಿಂದಾಗಿ ರಿಷಭ್ ಪಂತ್ ಹೊರಗುಳಿದ ಕಾರಣ ಇತ್ತೀಚೆಗೆ ವಿಂಡೀಸ್ ವಿರುದ್ಧದ ಭಾರತದ ಉಪನಾಯಕನಾಗಿ ಜಡೇಜಾ ಅವರನ್ನು ನೇಮಿಸಲಾಯಿತು.

Ravindra Jadeja
Ranji trophy: ಕರ್ನಾಟಕ ರಣಜಿ ತಂಡದಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಗೆ ಸ್ಥಾನ!

ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಮೇಲೆ ಕಣ್ಣು

ಸೇನಾ ದೇಶಗಳಲ್ಲಿ ರಕ್ಷಣಾತ್ಮಕ ಬೌಲರ್ ಎಂದೇ ಪರಿಗಣಿಸಿದ್ದರೂ, ಏಷ್ಯಾದಲ್ಲಿ ಜಡೇಜಾ ಅವರನ್ನು ಕೈಬಿಡಲು ಸಾಧ್ಯವಿಲ್ಲ. ಅವರು ತಮ್ಮ ಬ್ಯಾಟಿಂಗ್ ಅನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಆದ್ದರಿಂದ, ನವೆಂಬರ್ 14 ರಂದು ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟೆಸ್ಟ್‌ಗಳಿಗೆ ಅವರು ಬಹಳ ಮುಖ್ಯ. ಪಂದ್ಯದ ಅಭ್ಯಾಸವನ್ನು ಮುಂದುವರಿಸಲು ಮತ್ತು ಲಯದಲ್ಲಿ ಉಳಿಯಲು, ಜಡೇಜಾ ರಣಜಿ ಟ್ರೋಫಿ ಆಡಲು ಮುಂದಾಗಿದ್ದಾರೆ. ರಣಜಿ ಟ್ರೋಫಿಯಲ್ಲಿನ ಪ್ರಮುಖ ಹೆಸರುಗಳು ಭಾರತ ಎ ಜೆರ್ಸಿಯನ್ನು ಧರಿಸಲಿದ್ದರೂ, ಜಡೇಜಾ ಇದೀಗ ಪ್ರಮುಖ ಆಕರ್ಷಣೆಗಳಲ್ಲಿ ಒಬ್ಬರಾಗಿರುತ್ತಾರೆ.

ಅವರು ಧಮೇಂದ್ರಸಿನ್ಹ ಜಡೇಜಾ ಅವರೊಂದಿಗೆ ಬೆದರಿಕೆಯೊಡ್ಡುವ ಜೋಡಿಯಾಗಲಿದ್ದಾರೆ. ಅವರು ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವವರಾಗಿದ್ದಾರೆ. ಸೌರಾಷ್ಟ್ರ ಪರ ಒಟ್ಟಾರೆ 47 ರಣಜಿ ಪಂದ್ಯಗಳಲ್ಲಿ, ಅವರು 57.60 ಸರಾಸರಿಯಲ್ಲಿ 3,456 ರನ್ ಗಳಿಸಿದ್ದಾರೆ ಮತ್ತು 21.25 ಸರಾಸರಿಯಲ್ಲಿ 208 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸೌರಾಷ್ಟ್ರ ರಣಜಿ ಟ್ರೋಫಿ ತಂಡ

ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ತರಂಗ್ ಗೊಹೆಲ್, ರವೀಂದ್ರ ಜಡೇಜಾ, ಯುವರಾಜ್‌ಸಿನ್ಹ್ ದೋಡಿಯಾ, ಸಮ್ಮರ್ ಗಜ್ಜಾರ್, ಅರ್ಪಿತ್ ವಾಸವಾದ, ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಜಯದೇವ್ ಉನಾದ್ಕತ್ (ನಾಯಕ), ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಅಂಶ್ ಗೋಸಾಯಿ, ಜೇ ಗೋಹಿಲ್, ಪಾರ್ಥ್ ಬಹುತ್, ಕೆವಿನ್ ಜೀವರಾಜ್ಞಿ, ಹೆತ್ವಿಕ್ ಕೋಟಕ್ ಮತ್ತು ಅಂಕುರ್ ಪನ್ವಾರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com