IPL 2026: 'ಬೌಲರ್‌ಗಳೇ ಕಕ್ಕಾಬಿಕ್ಕಿಯಾಗಿದ್ದಾರೆ, ಮುಂದಕ್ಕೆ ಗತಿಯೇನು?'; ವೈಭವ್ ಸೂರ್ಯವಂಶಿ ಕೊಂಡಾಡಿದ ಪಾಕ್ ಮಾಜಿ ಆಟಗಾರರು!

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಕ್ಮಲ್, ಸೂರ್ಯವಂಶಿ ಶೀಘ್ರದಲ್ಲೇ ಟಿ20ಐ ಕ್ರಿಕೆಟ್‌ನಲ್ಲಿ ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಎಂದರು.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ಐಪಿಎಲ್ 2026ರಲ್ಲಿ ಭರ್ಜರಿ ಆರಂಭ ಪಡೆದ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಕಮ್ರಾನ್ ಅಕ್ಮಲ್ ಮತ್ತು ಬಸಿತ್ ಅಲಿ ಬಾಸ್ ಬೇಬಿ ವೈಭವ್ ಸೂರ್ಯವಂಶಿ ಆಟವನ್ನು ಕೊಂಡಾಡಿದ್ದಾರೆ. 15 ವರ್ಷದ ಎಡಗೈ ಬ್ಯಾಟ್ಸ್‌ಮನ್ ಸೋಮವಾರ 17 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದರು. ವೈಭವ್ ತಮ್ಮ ಆಕರ್ಷಕ ಅರ್ಧಶತಕದೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಸಾಧಿಸಲು ನೆರವಾದರು. ಆರ್‌ಆರ್‌ನ ಬೌಲರ್‌ಗಳು ಐದು ಬಾರಿ ಚಾಂಪಿಯನ್ ತಂಡವನ್ನು ಕೇವಲ 127 ರನ್‌ಗಳಿಗೆ ಕಟ್ಟಿಹಾಕಿದರು. ಬಳಿಕ ವೈಭವ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು.

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಕ್ಮಲ್, ಸೂರ್ಯವಂಶಿ ಶೀಘ್ರದಲ್ಲೇ ಟಿ20ಐ ಕ್ರಿಕೆಟ್‌ನಲ್ಲಿ ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಎಂದರು.

'ಐಪಿಎಲ್‌ನಲ್ಲಿ ಕೇವಲ 8 ಪಂದ್ಯಗಳಲ್ಲಿ ಅವರು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ- ಅವರು ಈಗಾಗಲೇ ಶತಕ ಗಳಿಸಿದ್ದಾರೆ. ಐಪಿಎಲ್ ನಂತರ ಭಾರತಕ್ಕಾಗಿ ಮುಂಬರುವ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಟಿ20 ಅಂತರರಾಷ್ಟ್ರೀಯ ತಂಡದ ಯುವ ಆಟಗಾರನಾಗುತ್ತಾರೆ. ಅವರು ಎಲ್ಲೆಡೆ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಅವರು ಪ್ರದರ್ಶನ ನೀಡುವುದನ್ನು ಮುಂದುವರಿಸಿದರೆ, ಅವರಿಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ' ಎಂದು ಅಕ್ಮಲ್ 'ದಿ ಗೇಮ್ ಪ್ಲಾನ್' ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ವೈಭವ್ ಸೂರ್ಯವಂಶಿ ಅವರ ಗಮನಾರ್ಹ ಆಟದ ಅರಿವನ್ನು ಅಕ್ಮಲ್ ಶ್ಲಾಘಿಸಿದರು. 15 ವರ್ಷದ ಬಾಲಕ ತನ್ನ ಪ್ರಸ್ತುತ ಪಥವನ್ನು ಮುಂದುವರಿಸಿದರೆ, ಒಂದು ದಶಕದ ನಂತರ ಬೌಲರ್‌ಗಳು "ಸುಳಿವುರಹಿತ"ರಾಗಬಹುದು ಎಂದು ಸೂಚಿಸಿದರು.

Vaibhav Sooryavanshi
IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್‌ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾ

'ಅವರ ಪ್ರೆಸೆನ್ಸ್ ಆಫ್ ಮೈಂಡ್, ಆಟದ ಬಗ್ಗೆ ಅರಿವು, ಅವರು ಆಡುವ ರೀತಿ - ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲದಕ್ಕೂ ಕೌಂಟರ್ ಹೊಂದಿದ್ದಾರೆ. ಇದು ಗಮನಾರ್ಹವಾಗಿದೆ... ಇದು 128 ರನ್‌ ಗುರಿ ಹೊಂದಿದ್ದ ಪಂದ್ಯವಾಗಿದ್ದರಿಂದ ನಾವು ಅವರ ಪ್ರದರ್ಶನದ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದೇವೆ. ಆದರೆ, ಅವರು 15 ಎಸೆತಗಳಲ್ಲಿ 50 ರನ್ ಗಳಿಸಿದ್ದರಿಂದ ಅವರ ಪ್ರದರ್ಶನ ಗೋಚರಿಸುತ್ತದೆ. ಅವರ ಕುಟುಂಬ ಮತ್ತು ಅವರ ತಂದೆ ಹೆಮ್ಮೆಪಡಬೇಕು. ಅವರು ವೈಭವ್ ಅವರೊಂದಿಗೆ ಕೆಲಸ ಮಾಡಿದ ರೀತಿ, ಶಾಲಾ ಕ್ರಿಕೆಟ್‌ನಲ್ಲಿ, ಕ್ಲಬ್ ಕ್ರಿಕೆಟ್‌ನಲ್ಲಿ ಅವರಿಗೆ ಕಲಿಸಿದ ಕೋಚ್‌ಗಳು ಉತ್ತಮವಾಗಿದ್ದಾರೆ. ನನಗೆ ಭಯವಾಗಿದೆ. ಅವರು 25 ವರ್ಷದವರಾಗಿದ್ದಾಗ, ಬೌಲರ್‌ಗಳು ಅವರನ್ನು ಯಾವ ರೀತಿ ಕಟ್ಟಿಹಾಕಬೇಕೆಂದು ತಿಳಿಯುವುದಿಲ್ಲ' ಎಂದು ಅವರು ಹೇಳಿದರು.

ಬಸಿತ್ ಅಲಿ, ವೈಭವ್ ಸೂರ್ಯವಂಶಿಯನ್ನು 'ಏಕ್ ಬಬ್ಲು ಸಬ್ಪೆ ಭಾರಿ' (ಒಬ್ಬ ಮಗು ಎಲ್ಲರ ವಿರುದ್ಧ ಮೇಲುಗೈ ಸಾಧಿಸುತ್ತಿದೆ) ಎಂದು ಕರೆದರು.

'ಅವರು (ರಾಜಸ್ಥಾನ ರಾಯಲ್ಸ್) 128 ರನ್‌ಗಳನ್ನು ಆರಾಮಾಗಿ ಬೆನ್ನಟ್ಟಿದರು. ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ 50 ರನ್ ಗಳಿಸಿದರು. ಎಂತಹ ಇನಿಂಗ್ಸ್, ಅವರು ತಮ್ಮ ಫಾರ್ಮ್ ಅನ್ನು ಸ್ಪಷ್ಟವಾಗಿ ತೋರಿಸಿದರು. ಜೈಸ್ವಾಲ್ 37 ರನ್ ಗಳಿಸಿ ಔಟಾಗದೆ ಉಳಿದರು. ಆದರೆ, ಬಬ್ಲು (ಸೂರ್ಯವಂಶಿ) ಇನ್ನೊಂದು ತುದಿಯಿಂದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒಬ್ಬ ಬಬ್ಲು ಎಲ್ಲರ ವಿರುದ್ಧ ಮೇಲುಗೈ ಸಾಧಿಸಿದರು. ಆರ್‌ಆರ್ vs ಸಿಎಸ್‌ಕೆ ಪಂದ್ಯದಲ್ಲಿ ನಿಖರವಾಗಿ ಹಾಗೆ ಅನಿಸಿತು' ಎಂದು ಬಸಿತ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com