Galle Test: ಅದ್ಭುತ ಕ್ಯಾಚ್ ಹಿಡಿದ ಲಂಕಾ ನಾಯಕ, ಅವಾಕ್ಕಾದ Dhruv Jurel, ಅಭಿಮಾನಿಗಳಿಗೂ ಅಚ್ಚರಿ, Video

ಮಳೆಯಿಂದಾಗಿ ಮೊದಲ ಸೆಷನ್ ಸಂಪೂರ್ಣ ರದ್ದಾಗಿದ್ದರಿಂದ ಎರಡನೇ ದಿನದಾಟ ತಡವಾಗಿ ಆರಂಭವಾಯಿತು. ಭಾರತ 288/2ರಿಂದ ಇನ್ನಿಂಗ್ಸ್ ಮುಂದುವರಿಸಿತು.
Sri Lanka Captain Grabs One-Handed Stunner To Dismiss Dhruv Jurel
ಅದ್ಭುತ ಕ್ಯಾಚ್ ಹಿಡಿದ ಲಂಕಾ ನಾಯಕ ಧನಂಜಯ ಡಿ ಸಿಲ್ವಾ
Updated on

ಗಾಲೆ: ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಹಿಡಿದ ಅದ್ಭುತ ಕ್ಯಾಚ್ ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಹೌದು.. ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನ ಭಾರತ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಧ್ರುವ್ ಜುರೆಲ್ ಔಟಾದ ರೀತಿ ದಿನದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಯಿತು. ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಹಿಡಿದ ಅದ್ಭುತ ಸಿಂಗಲ್ ಹ್ಯಾಂಡ್ ಕ್ಯಾಚ್ ಎಲ್ಲರ ಗಮನ ಸೆಳೆಯಿತು.

ಮಳೆಯಿಂದಾಗಿ ಮೊದಲ ಸೆಷನ್ ಸಂಪೂರ್ಣ ರದ್ದಾಗಿದ್ದರಿಂದ ಎರಡನೇ ದಿನದಾಟ ತಡವಾಗಿ ಆರಂಭವಾಯಿತು. ಭಾರತ 288/2ರಿಂದ ಇನ್ನಿಂಗ್ಸ್ ಮುಂದುವರಿಸಿತು.

ದೇವದತ್ ಪಡಿಕ್ಕಲ್ ಅಮೋಘ 167 ರನ್ ಗಳಿಸಿದರೆ, ಕೆ.ಎಲ್. ರಾಹುಲ್ 82 ರನ್‌ಗಳ ಕೊಡುಗೆ ನೀಡಿದರು. ದಿನದಾಟದ ಅಂತ್ಯಕ್ಕೆ ಭಾರತ 116 ಓವರ್‌ಗಳಲ್ಲಿ 460/9 ರನ್ ಗಳಿಸಿತು.

Sri Lanka Captain Grabs One-Handed Stunner To Dismiss Dhruv Jurel
Cricket: ‘ಕಾಮನ್ ಸೆನ್ಸ್ ಇಲ್ವಾ?’; ಲಂಕಾ ವಿರುದ್ಧ Rishabh Pant ಔಟ್‌ಗೆ ಮೊಹಮ್ಮದ್ ಕೈಫ್ ಗರಂ

ಅದ್ಭುತ ಕ್ಯಾಚ್ ಹಿಡಿದ ಲಂಕಾ ನಾಯಕ

110ನೇ ಓವರ್‌ನಲ್ಲಿ ನಡೆದ ಜುರೆಲ್‌ರ ವಿಕೆಟ್ ಎಲ್ಲರನ್ನೂ ಬೆರಗುಗೊಳಿಸಿತು. ಸ್ವತಃ ಜುರೆಲ್ ಕೂಡ ಅದನ್ನು ನಂಬಲಾಗದೇ ಅವಾಕ್ಕಾದರು. ಪ್ರಭಾತ್ ಜಯಸೂರ್ಯ ಎಸೆದ ಚೆಂಡನ್ನು ಜುರೆಲ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು.

ಆದರೆ ಎಡಗೈ ಸ್ಪಿನ್ನರ್ ಚೆಂಡಿಗೆ ನೀಡಿದ ತೀಕ್ಷ್ಣ ತಿರುವಿನಿಂದ ಜುರೆಲ್‌ಗೆ ಸರಿಯಾಗಿ ಬ್ಯಾಟ್‌ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಚೆಂಡು ಬ್ಯಾಟ್‌ನ ಮುಂಭಾಗಕ್ಕೆ ತಾಗಿ ಎಡ್ಜ್ ಆಗಿ ಮೊದಲ ಸ್ಲಿಪ್‌ನತ್ತ ಸಾಗಿತು.

ಅಲ್ಲಿ ಸಜ್ಜಾಗಿ ನಿಂತಿದ್ದ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಕ್ಷಣಾರ್ಧದಲ್ಲಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಅವರ ಚುರುಕುತನ ಮತ್ತು ಅಥ್ಲೆಟಿಕ್ ಪ್ರದರ್ಶನಕ್ಕೆ ಮೈದಾನದಲ್ಲಿದ್ದವರಷ್ಟೇ ಅಲ್ಲ, ಟಿವಿ ವೀಕ್ಷಕರೂ ಬೆರಗಾದರು.

ತಮ್ಮ ವಿಕೆಟ್ ಕಳೆದುಕೊಂಡ ಜುರೆಲ್ ಕೂಡ ಕ್ಷಣಕಾಲ ನಂಬಲಾರದಂತೆ ನೋಡುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಅವರು 68 ಎಸೆತಗಳಲ್ಲಿ 51 ರನ್ ಗಳಿಸಿದ್ದರು.

ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್

ಇನ್ನು ಭಾರತದ ಪರ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ವೃತ್ತಿಜೀವನದ ಶ್ರೇಷ್ಠ 167 ರನ್‌ಗಳ ಇನ್ನಿಂಗ್ಸ್ ಆಡಿದರು. ತಾಳ್ಮೆಯ ಆಟದೊಂದಿಗೆ ಅಗತ್ಯವಿದ್ದಾಗ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿದ ಪಡಿಕ್ಕಲ್, ಉಪಖಂಡದ ಪಿಚ್‌ನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ನೀಡಿದರು.

ಕೆ.ಎಲ್. ರಾಹುಲ್ 82 ರನ್ ಗಳಿಸಿದರೆ, ಧ್ರುವ್ ಜುರೆಲ್ 51 ರನ್ ಗಳಿಸಿದರು. ಜುರೆಲ್ ಹಾಗೂ ಮಾನವ್ ಸುತಾರ್ ನಡುವೆ 55 ರನ್‌ಗಳ ಜೊತೆಯಾಟವೂ ಮೂಡಿಬಂತು. ಮಳೆಯ ಕಾರಣ ಎರಡನೇ ದಿನ ಕೇವಲ 43 ಓವರ್‌ಗಳ ಆಟವಷ್ಟೇ ಸಾಧ್ಯವಾಯಿತು. ಆದರೂ ಭಾರತ ಲಭ್ಯವಾದ ಸಮಯದಲ್ಲಿ 172 ರನ್ ಸೇರಿಸಿತು. ಶ್ರೀಲಂಕಾ ಸ್ಪಿನ್ನರ್‌ಗಳು ಹೊಸ ಚೆಂಡಿನ ನೆರವಿನಿಂದ ಭಾರತದ ಬ್ಯಾಟರ್‌ಗಳಿಗೆ ತೊಂದರೆ ನೀಡಿದರು.

ದಿನದಾಟದ ಅಂತ್ಯಕ್ಕೆ ಕುಲದೀಪ್ ಯಾದವ್ 12 ಮತ್ತು ಪ್ರಸಿದ್ಧ್ ಕೃಷ್ಣ 1 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದರು. ಭಾರತ 460/9ರಲ್ಲಿರುವುದರಿಂದ ಶ್ರೀಲಂಕಾದ ಬ್ಯಾಟಿಂಗ್‌ ಮೇಲೆ ಒತ್ತಡ ಹೇರುವ ಉದ್ದೇಶದಿಂದ ರಾತ್ರಿ ಡಿಕ್ಲರೇಷನ್ ಮಾಡುವ ಸಾಧ್ಯತೆಯೂ ಇದೆ. ಶ್ರೀಲಂಕಾ ಪರ ಪ್ರಭಾತ್ ಜಯಸೂರ್ಯ 109 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com