ಐಪಿಎಲ್ 2026ನೇ ಆವೃತ್ತಿಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತ ಎರಡನೇ ಬಾರಿ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ ದಾಖಲೆ ಬರೆದಿದೆ. ಬರೋಬ್ಬರಿ 17 ವರ್ಷಗಳ ಕಾಯುವಿಕೆ ನಂತರ ಐಪಿಎಲ್ 2025ರಲ್ಲಿ ಆರ್ಸಿಬಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಅತ್ಯಂತ ಬಲಿಷ್ಠ ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾದ ಆರ್ಸಿಬಿ ಭಾನುವಾರ ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಗೆಲುವು ಸಾಧಿಸಿದೆ.
ಚಾಂಪಿಯನ್ಸ್ ಟ್ಯಾಗ್ಗಾಗಿ ಆರ್ಸಿಬಿಗೆ ₹20 ಕೋಟಿ ಬಹುಮಾನ ನೀಡಲಾಯಿತು. ಆ ಹಣವನ್ನು ಹೇಗೆ ಹಂಚಲಾಗುತ್ತದೆ ಎಂದು ಮಿ. ನಾಗ್ಸ್ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಹಾಸ್ಯಾಸ್ಪದವಾಗಿ ಕೇಳಿದರು. ಅದಕ್ಕವರು, 'ಅದೊಂತರ, ಈ ಬಗ್ಗೆ ತಿಳಿದುಕೊಳ್ಳಲು ನಮಗೂ ತುಂಬಾ ಆಸಕ್ತಿ ಇದೆ' ಎಂದಿದ್ದಾರೆ.
ಈಮಧ್ಯೆ, ಐಪಿಎಲ್ 2026ರ ಟೂರ್ನಮೆಂಟ್ನ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನ ಪಡೆದ ನಂತರ ಭುವನೇಶ್ವರ್ ಕುಮಾರ್, 'ಈ ಸೀಸನ್ ನನಗೆ ಚೆನ್ನಾಗಿ ನಡೆಯಿತು' ಎಂದು ಹೇಳಿದರು.
ಫೈನಲ್ ಪಂದ್ಯದ ನಂತರದ ಸಂದರ್ಶನದಲ್ಲಿ ಮಾತನಾಡಿದ ಭುವನೇಶ್ವರ್, 'ಟ್ರೋಫಿ ಗೆಲ್ಲುವುದು ನನ್ನ ವೈಯಕ್ತಿಕ ಸಾಧನೆಗಳಿಗಿಂತ ನನಗೆ ಹೆಚ್ಚು ಮುಖ್ಯವಾಗಿದೆ. ತಂಡವು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾದರೆ ನನ್ನ ವೈಯಕ್ತಿಕ ಯಶಸ್ಸನ್ನು ನಾನು ಸಂತೋಷದಿಂದ ತ್ಯಜಿಸುತ್ತೇನೆ. ಆದಾಗ್ಯೂ, ನನ್ನ ಪ್ರದರ್ಶನವನ್ನು ನೋಡಿದರೆ, ನಾನು ಉತ್ತಮ ಆವೃತ್ತಿಯನ್ನು ಹೊಂದಿದ್ದೆ. ಆವೃತ್ತಿಯ ಆರಂಭದ ಮೊದಲು, ನನಗೆ ಕೆಲವು ಗುರಿಗಳು ಮತ್ತು ಯೋಜನೆಗಳಿದ್ದವು ಮತ್ತು ಒಟ್ಟಾರೆಯಾಗಿ ಅವೆಲ್ಲವೂ ನಾನು ನಿರೀಕ್ಷಿಸಿದಂತೆ ಕೆಲಸ ಮಾಡಿದೆ' ಎಂದು ಹೇಳಿದರು.
'ಜಿಟಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡದ ಯಶಸ್ಸಿಗೆ ತಂಡದ ಸಹಕಾರವೇ ಕಾರಣ' ಎಂದು ಅನುಭವಿ ಸೀಮರ್ ಹೇಳಿದ್ದಾರೆ. 'ನೀವು ವಿಕೆಟ್ ಪಡೆದರೆ, ನಿಮ್ಮ ಆತ್ಮವಿಶ್ವಾಸ ಯಾವಾಗಲೂ ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅಂತಹ ದೊಡ್ಡ ಪಂದ್ಯಗಳಲ್ಲಿ, ನೀವು ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರೆ, ಅದು ಯಾವಾಗಲೂ ಸಹಾಯ ಮಾಡುತ್ತದೆ. ಆದರೆ ಅದರ ಶ್ರೇಯಸ್ಸು ಪ್ರತಿಯೊಬ್ಬರಿಗೂ ಸಲ್ಲುತ್ತದೆ. ಅವರು (ಜಾಶ್ ಹೇಜಲ್ವುಡ್) ಉತ್ತಮವಾಗಿ ಆಡದಿದ್ದರೆ, ನಾನು ಅಲ್ಲಿದ್ದೆ. ನಾನು ಉತ್ತಮವಾಗಿ ಆಡದಿದ್ದರೆ, ರಸಿಕ್ ಅಲ್ಲಿದ್ದರು. ಆದ್ದರಿಂದ ನಾವೆಲ್ಲರೂ ಪರಸ್ಪರರ ಬೆನ್ನಿಗೆ ನಿಂತಿದ್ದೇವೆ ಎಂದು ನಾನು ಭಾವಿಸುತ್ತೇನೆ ಮತ್ತು ದೊಡ್ಡ ಪಂದ್ಯದಲ್ಲಿ ನಿಮಗೆ ಬೇಕಾಗಿರುವುದು ಅದೇ' ಎಂದು ಅವರು ಹೇಳಿದರು.
Advertisement