ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ 'ಅಸಾಮಾನ್ಯ' ಅಂಶವೊಂದಿದೆ, ಅದೇನೆಂದರೆ; ಇಂಗ್ಲೆಂಡ್‌ ಮಾಜಿ ನಾಯಕ ಅಲಸ್ಟೇರ್ ಕುಕ್

ಇಂಗ್ಲೆಂಡ್ ತಂಡದ ಮತ್ತೊಬ್ಬ ಮಾಜಿ ನಾಯಕ ಮೈಕೆಲ್ ವಾಘನ್ ಕೂಡ 15 ವರ್ಷದ ಬಾಲಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ 2026ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, 776 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ರಾಜಸ್ಥಾನ್ ರಾಯಲ್ಸ್ (RR) ಪರ ಭರ್ಜರಿ ಪ್ರದರ್ಶನ ನೀಡಿದ್ದರಿಂದ ವೈಭವ್ ಸೂರ್ಯವಂಶಿ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳುವಂತೆ ಸಾಕಷ್ಟು ಒತ್ತಡಗಳು ಕೇಳಿಬಂದಿವೆ. ಟೂರ್ನಮೆಂಟ್‌ನ ಆರೆಂಜ್ ಕ್ಯಾಪ್ ಮತ್ತು ಅತ್ಯಂತ ಮೌಲ್ಯಯುತ ಆಟಗಾರ (MVP) ಮತ್ತು ಆವೃತ್ತಿಯ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರು. 237.31ರ ಗಮನಾರ್ಹ ಸ್ಟ್ರೈಕ್ ರೇಟ್ ಅನ್ನು ಕಾಯ್ದುಕೊಂಡ ನಂತರ ಅವರು ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನು ಸಹ ಪಡೆದರು ಮತ್ತು ಅಭಿಯಾನದ ಸಮಯದಲ್ಲಿ ದಾಖಲೆಯ 72 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸೂಪರ್ ಸಿಕ್ಸಸ್ ಪ್ರಶಸ್ತಿಯನ್ನು ಗೆದ್ದರು.

ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೇರ್ ಕುಕ್ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, 'ಇದರಲ್ಲಿ ಒಂದೇ ಒಂದು ವಿಷಯವಿದೆ ಎಂದು ನಾನು ಭಾವಿಸುತ್ತೇನೆ - ಯಾವುದೇ ಪೂರ್ವಯೋಜಿತ ಯೋಜನೆ ಇದ್ದಂತೆ ಕಾಣುತ್ತಿಲ್ಲ' ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

'ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಒಂದು ಅಥವಾ ಎರಡು ನಿರ್ದಿಷ್ಟ ಪ್ರದೇಶಗಳನ್ನು ಹೊಂದಿದ್ದು, ಅಲ್ಲಿಗೆ ಚೆಂಡು ಬಂದಾಗ ಸಿಕ್ಸ್ ಹೊಡೆಯಲು ಬಯಸುತ್ತಾರೆ. ಅವರು ಅದಕ್ಕಾಗಿ ಕಾಯುತ್ತಾರೆ. ಆದರೆ, ಈ ಬ್ಯಾಟ್ಸ್‌ಮನ್ ವಿಭಿನ್ನ. ಅವರಿಗೆ ನಿರ್ದಿಷ್ಟ ಸ್ಥಳದಲ್ಲಿ ಚೆಂಡು ಬರುವ ಅಗತ್ಯವಿಲ್ಲ. ವೇಗಿ ಸುಮಾರು 99 mph (159 km/h) ವೇಗದಲ್ಲಿ ಚೆಂಡನ್ನು ಎಸೆದರೂ ಸಹ, ಆತ ಕೊನೆವರೆಗೆ ಕಾಯಬಹುದು ಮತ್ತು ಅದಕ್ಕೆ ಪ್ರತಿಕ್ರಿಯಿಸಬಹುದು ಮತ್ತು ಅದನ್ನೂ ಸಿಕ್ಸರ್‌ಗೆ ಹೊಡೆಯಬಹುದು. ಇದು ಅಸಾಮಾನ್ಯ ಎಂದು ನಾನು ಭಾವಿಸುತ್ತೇನೆ' ಎಂದರು.

ಇಂಗ್ಲೆಂಡ್ ತಂಡದ ಮತ್ತೊಬ್ಬ ಮಾಜಿ ನಾಯಕ ಮೈಕೆಲ್ ವಾಘನ್ ಕೂಡ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Vaibhav Sooryavanshi
'ವೈಭವ್ ಸೂರ್ಯವಂಶಿ ಅವರಂತಹ PR ಬಿಹಾರಕ್ಕೆ ಬೇಕಿತ್ತು': ಲಾಲು ಪ್ರಸಾದ್ ಯಾದವ್ ಎಲ್ಲವನ್ನೂ ಹಾಳು ಮಾಡಿದ್ದರು; ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್

'ಕಳೆದ ವಾರ ನಾನು ಮುಂಬೈನಲ್ಲಿ ಪೂಲ್‌ನಲ್ಲಿದ್ದೆ. ರಾಜಸ್ಥಾನ ಮತ್ತು ಮುಂಬೈ ಆಡುತ್ತಿದೆ. ಪ್ಲೇಆಫ್‌ಗೆ ಹೋಗಲು ಅದು ಗೆಲ್ಲಲೇಬೇಕಾದ ಪಂದ್ಯ. ಯಶಸ್ವಿ ಜೈಸ್ವಾಲ್ ಬರುತ್ತಾರೆ. ನಂತರ ಮಗು (ಸೂರ್ಯವಂಶಿ) ಬರುತ್ತದೆ. ಆಗ ನಾನು: 'ನಿಮ್ಮನ್ನು ಭೇಟಿಯಾಗಲು ಸಂತೋಷವಾಗಿದೆ. ನೀವು ಆಡುವ ರೀತಿಗೆ ಸಂಪೂರ್ಣ ಮೆಚ್ಚುಗೆಗಳು. ನೀವು ಪಂದ್ಯಗಳಿಗೆ ಹೇಗೆ ತಯಾರಿ ನಡೆಸುತ್ತೀರಿ?' ಎಂದು ಕೇಳಿದೆ. ಅಗ ಅವರು: 'ಕಾರ್ಟೂನ್ ನೋಡುತ್ತೇನೆ' ಎಂದರು. ಆಗ ನಾನು... ಸರಿ. 'ನೀವು ತರಬೇತಿ ಪಡೆಯುತ್ತಿದ್ದೀರಾ?' ಎಂದು ಕೇಳಿದೆ ಅದಕ್ಕವನು, 'ಇಲ್ಲ' ಎಂದು ಹೇಳಿದರು. ನಾನು, 'ನೀವು ಏನು ತಿನ್ನುತ್ತೀರಿ?' ಎಂದು ಕೇಳಿದೆ ಅವ, 'ಎಲ್ಲವನ್ನೂ' ಎಂದು ಹೇಳಿದನು. ಆಗ ನಾನು- ಈತ ಆಧುನಿಕ ಆಟಗಾರ. ಕಾರ್ಟೂನ್ ನೋಡಿ, ನಿಮಗೆ ಬೇಕಾದುದನ್ನು ತಿನ್ನಿರಿ, ಮತ್ತು ಚೆಂಡನ್ನು ಬಾರಿಸಿ' ಎಂದಿದ್ದಾಗಿ ಹೇಳಿದರು.

ಸೂರ್ಯವಂಶಿ ಮುಂದಿನ ಬಾರಿ ಶ್ರೀಲಂಕಾದಲ್ಲಿ ಭಾರತ ಎ ತ್ರಿಕೋನ ಸರಣಿಯನ್ನು ಆಡಲಿದ್ದಾರೆ. ಅವರನ್ನು ಭಾರತದ ಐರ್ಲೆಂಡ್ ಪ್ರವಾಸಕ್ಕೂ ಆಯ್ಕೆ ಮಾಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com