ಮಹಾರಾಜ ಟ್ರೋಫಿ 2026 ಹರಾಜು: IPL ಮುಗಿದ ಬೆನ್ನಲ್ಲೇ ಹೊಸ T20 ತಂಡಕ್ಕೆ ಪಡಿಕ್ಕಲ್ ಸೇರ್ಪಡೆ

ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ನಗರದಲ್ಲಿ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ದೇವದತ್ ಪಡಿಕ್ಕಲ್ ಅವರು ಇದೀಗ ಹೊಸ ತಂಡವನ್ನು ಸೇರಿಕೊಂಡಿದ್ದಾರೆ.
Devdutt Padikkal
ದೇವದತ್ ಪಡಿಕ್ಕಲ್
Updated on

ಬೆಂಗಳೂರು: ಐಪಿಎಲ್ 2026 ಮುಕ್ತಾಯವಾದ ಬೆನ್ನಲ್ಲೇ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿ ಇದೇ ಜೂನ್ 20 ರಿಂದ ಆರಂಭವಾಗುತ್ತಿದ್ದು, ಜುಲೈ 12 ರವರೆಗೆ ನಡೆಯಲಿದೆ.

ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ನಗರದಲ್ಲಿ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ದೇವದತ್ ಪಡಿಕ್ಕಲ್ ಅವರು ಇದೀಗ ಹೊಸ ತಂಡವನ್ನು ಸೇರಿಕೊಂಡಿದ್ದಾರೆ.

ಮಹಾರಾಜ ಟ್ರೋಫಿ ಹರಾಜಿನಲ್ಲಿ ಮೈಸೂರ್ ವಾರಿಯರ್ಸ್​ ಫ್ರಾಂಚೈಸಿ ದೇವದತ್ ಪಡಿಕ್ಕಲ್ ಅವರನ್ನು ಗೆ 2 ಲಕ್ಷ 60 ಸಾವಿರ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಮೈಸೂರ್ ವಾರಿಯರ್ಸ್​ ಫ್ರಾಂಚೈಸಿ ಪಡಿಕ್ಕಲ್​ಗೂ ಮೊದಲು ಐಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ವೇಗಿ ವೈಶಾಕ್ ವಿಜಯ್​ಕುಮಾರ್ ಅವರನ್ನು 8.25 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿತು.

Devdutt Padikkal
ಮಹಾರಾಜ ಟ್ರೋಫಿ 2026 ಹರಾಜು: ₹2 ಲಕ್ಷ ಮೂಲ ಬೆಲೆ ಹೊಂದಿದ್ದರೂ ಅನ್‌ಸೋಲ್ಡ್ ಆದ ಕೆ.ಎಲ್ ರಾಹುಲ್!

ಮತ್ತೊಬ್ಬ ಟೀಂ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ ಅವರು ಸಹ 2.60 ಲಕ್ಷಕ್ಕೆ ಮೈಸೂರ್ ವಾರಿಯರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆರ್​ಸಿಬಿಯ ಮಾಜಿ ಆಟಗಾರ ಮನೋಬ್ ಬಾಂಡಗೆ ಅವರನ್ನು 10 ಲಕ್ಷಕ್ಕೆ ಖರೀದಿ ಮಾಡಿದೆ. ಸ್ಫೋಟಕ ಬ್ಯಾಟರ್ ಚೇತನ್ ಎಲ್​ ಆರ್ ಕೂಡ 11.50 ಲಕ್ಷಕ್ಕೆ ಮೈಸೂರು ತಂಡವನ್ನು ಸೇರಿಕೊಂಡಿದ್ದಾರೆ.

ಹರಾಜಿನಲ್ಲಿ ಒಟ್ಟು ಆರು ತಂಡಗಳು ತಲಾ 60 ಲಕ್ಷ ರೂ ಪರ್ಸ್‌ನೊಂದಿಗೆ ಒಟ್ಟು 150 ಆಟಗಾರರಲ್ಲಿ ತಮ್ಮ ಅಗತ್ಯಕ್ಕೆ ತಕ್ಕತೆ ಆಟಗಾರರನ್ನು ಖರೀದಿಸಿ ತಮ್ಮ-ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿಕೊಳ್ಳಲು ಪ್ರಯತ್ನಿಸಿವೆ. ಒಂದು ತಂಡ ಕನಿಷ್ಠ 16 ಆಟಗಾರರು ಹಾಗೂ ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com