

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಿರ್ಣಾಯಕ ಎರಡನೇ ಸೆಮಿಫೈನಲ್ ಹಣಾಹಣಿ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಮೊದಲಿಗೆ ಫೀಲ್ಡಿಂಗ್ ಆಯ್ದುಕೊಂಡರು.
ಬಳಿಕ ಮಾತನಾಡಿದ ಹ್ಯಾರಿ ಬ್ರೂಕ್, ನಾವು ಮೊದಲಿಗೆ ಬೌಲಿಂಗ್ ಮಾಡುತ್ತಿದ್ದು, ವಿಕೆಟ್ ಕೀಳುವ ವಿಶ್ವಾಸದಲ್ಲಿದ್ದೇವೆ. ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ನಿಸ್ಸಂಶಯವಾಗಿ ಈ ಮೈದಾನದಲ್ಲಿ ನಮಗಿಂತ ಭಾರತದವರು ಹೆಚ್ಚಿನ ಅನುಭವ ಹೊಂದಿದ್ದಾರೆ.
T20 ಕ್ರಿಕೆಟ್ ನಲ್ಲಿ ಏನಾಗಲಿದೆ ಎಂಬುದು ನಿಮಗೆ ತಿಳಿದಿಲ್ಲ. ಭಾರತವನ್ನು ಸೋಲಿಸುವ ವಿಶ್ವಾಸದಲ್ಲಿದ್ದೇವೆ ಎಂದು ಹೇಳಿದರು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿ, ಮೊದಲು ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದ್ದೇವೆ. ಸೆಮಿಫೈನಲ್, ದೊಡ್ಡ ಆಟ. ಇಬ್ಬನಿ ಇದ್ದರೂ ಫಿಚ್ ಅತ್ಯುತ್ತಮವಾಗಿದೆ. ಇದರ ಕ್ರೆಡಿಟ್ ನ್ನು ಕ್ಯೂರೆಟರ್ ಹಾಗೂ ಗ್ರೌಂಡ್ಸ್ ಸಿಬ್ಬಂದಿಗೆ ನೀಡಬೇಕು ಎಂದು ಹೇಳಿದರು.
Advertisement