ರಾಜರ ಈ ಸಿಂಹಾಸನ ಅಂಜುರ ಮರದಿಂದ ಮಾಡಿರುವಂತದು. ಹಲವಾರು ರಾಜರು ತಮ್ಮ ಕಲಾಭಿರುಚಿಗೆ ತಕ್ಕಂತೆ ಸಿಂಹಾಸನದ ಮೂಲ ಸ್ವರೂಪವನ್ನು ಬದಲಾವಣೆ ಮಾಡುತ್ತಾ ಬಂದಿದ್ದರು. ಮುಮ್ಮುಡಿ ಕೃಷ್ಣ ರಾಜ ಒಡೆಯರ್ ಅವರು 1912 ಮತ್ತು 1914ರಲ್ಲಿ ಸಿಂಹಾಸನದ ಸೌಂದರ್ಯ ಹಾಗೆ ಆಕರ್ಷಣೆ ಹೆಚ್ಚಿಸಲು ಹಲವಾರು ಮಾರ್ಪಾಡು ಮಾಡಿ ಸಿಂಹಾಸನಕ್ಕೆ ಹೊಸ ರೂಪ ನೀಡಿದ ರುವಾರಿ ಎನಿಸಿದರು. ಮುತ್ತು, ಹವಳ, ರತ್ನ, ಪಚ್ಚೆ, ಕೆಂಪು, ನೀಲ, ವಜ್ರ, ಹಾಗೂ ಗೋಮೇದಕಗಳನ್ನಾ ಶಾಸ್ತ್ರೋತ್ತವಾಗಿ ಸೇರಿಸಿ ಸಿಂಹಾಸವನ್ನು ನವರತ್ನ ಖಚಿತಗೊಳಿಸಿದರು. ಅಪ್ಪಟ ಚಿನ್ನದ ಪಟ್ಟಿಗಳು, ಆಸು, ಲೇಪಗಳು ಮತ್ತಷ್ಟು ಸೌಂದರ್ಯದ ವಿಜೃಂಭಣೆಗೆ ಮೆರಗು ನೀಡಿದವು, ಸಿಂಹಾಸನದ ಹೊರ ಮೈ ಮೇಲೆ ಚಿನ್ನದ ಲೇಪ ಮಾಡಿದ ಬೆಳ್ಳಿಯ ತಗಡನ್ನು ಜೋಡಿಸಲಾಯಿತು. ಚಿನ್ನದ ಅಲಂಕಾರಿಕ ಎಲೆಗಳನ್ನಾ ಹೊಸದಾಗಿ ಕೂಡಿಸಲಾಯಿತು. ಕೆಲ ದಿನಗಳ ಬಳಿಕ ಹೊರ ಮೈ ಮೇಲಿದ್ದ ಬೆಳ್ಳಿಯ ತಗಡನ್ನು ತೆಗೆಸಿ, ಸಂಪೂರ್ಣ ಶುದ್ಧ ಸ್ವರ್ಣ ಫಲಕವನ್ನು ಜೋಡಿಸಲಾಯಿತು. ಯದುವಂಶದ ಅರಸರ ಈ ಸಿಂಹಾಸನದ ತೂಕ ಬರೋಬ್ಬರಿ 250 ಕೆಜಿ.