ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆರ್ ಟಿಇ ಸೀಟು ವಂಚನೆ: ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್

ಆರ್ ಟಿಇ ಸೀಟು ಕೊಡಲು ಸತಾಯಿಸುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಲೋಕಾಯುಕ್ತರು ಬೆಂಗಳೂರು ನಗರ ಜಿಲ್ಲಾ...

ವಿಧಾನಪರಿಷತ್ತು: ಆರ್ ಟಿಇ ಸೀಟು ಕೊಡಲು ಸತಾಯಿಸುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಲೋಕಾಯುಕ್ತರು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಬಿಇಓಗಳಿಗೆ ಆದೇಶಿಸಿದ್ದಾರೆ.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಡಿ.ಎಸ್ ವೀರಯ್ಯ, ಕೆಲವು ಶಾಲೆಗಳಲ್ಲಿ ಆರ್ ಟಿಇ ಮೂಲಕ ಅರ್ಹರಿಗೆ ಸೀಟು ಕೊಡದೇ ಸತಾಯಿಸಲಾಗುತ್ತಿದೆ. ನಿಯಮಗಳನ್ನೂ ಪಾಲಿಸುತ್ತಿಲ್ಲ, ಶಾಲೆ ಒಳಗೂ ಪೋಷಕರಿಗೆ ಬಿಡುತ್ತಿಲ್ಲ ಎಂದರು.

ನಂತರ ಉತ್ತರಿಸಿದ ಸಭಾನಾಯಕರು, ಆರ್ ಟಿಇ ಅಡಿ ಸೀಟು ಕೊಡದೇ ಸತಾಯಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಲ್ಲದೇ, ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಬೆಂಗಳೂರಿನ ಬಿಇಓಗಳ ಸಭೆ ನಡಸಿ ವರದಿ ಕೇಳಿದ್ದಾರೆ.

ಹಾಗೆಯೇ ಸೀಟು ಕೊಡದೇ ಸತಾಯಿಸುತ್ತಿರುವ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಿದ್ದಾರೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com