ಜಿಲ್ಲಾ ಸುದ್ದಿ
34 ಬಾಲ ಕಾರ್ಮಿಕರ ರಕ್ಷಣೆ
ಮಾಗಡಿ ರಸ್ತೆ ತಾವರೆಕೆರೆ ಸಮೀಪದ ಔಷದ ಉತ್ಪನ್ನಗಳ ಕಾರ್ಖಾನೆ ಮೇಲೆ ದಾಳಿ ನಡೆಸಿದ ಸಿಐಡಿ ಮಾನವ ಕಳ್ಳಸಾಗಣೆ ತಡೆ ಘಟಕದ ಅಧಿಕಾರಿಗಳು...
ಬೆಂಗಳೂರು: ಮಾಗಡಿ ರಸ್ತೆ ತಾವರೆಕೆರೆ ಸಮೀಪದ ಔಷದ ಉತ್ಪನ್ನಗಳ ಕಾರ್ಖಾನೆ ಮೇಲೆ ದಾಳಿ ನಡೆಸಿದ ಸಿಐಡಿ ಮಾನವ ಕಳ್ಳಸಾಗಣೆ ತಡೆ ಘಟಕದ ಅಧಿಕಾರಿಗಳು, 34 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಶೀಗೆಹಳ್ಳಿ ಕ್ರಾಸ್ ಕನ್ನಳ್ಳಿ ಸಮೀಪದ ಕಾರ್ಖಾನೆಯ ಮೇಲೆ ಗುರುವಾರ ಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳು 12 ಬಾಲಕರು, 19 ಬಾಲಕಿಯರು ಹಾಗೂ 14 ವರ್ಷದೊಳಗಿನ ಮೂವರು ಮಕ್ಕಳನ್ನು ರಕ್ಷಿಸಿದ್ದಾರೆ.
ಕಾರ್ಖಾನೆಯೊಂದರಲ್ಲಿ ಬಾಲಕರನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.