ಮತ್ತೆ ಏಳು ರೈತರ ಆತ್ಮಹತ್ಯೆ

ಬೆಳೆಹಾನಿ, ಸಾಲಬಾಧೆಯಿಂದ ಕಲಬುರಗಿಯ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಭಾನುವಾರವೂ ಏಳು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಳೆಹಾನಿ, ಸಾಲಬಾಧೆಯಿಂದ ಕಲಬುರಗಿ ಯ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಭಾನುವಾರವೂ ಏಳು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳಿಯ ಅಣ್ಣೆಪ್ಪ (55), ಆಳಂದ ತಾಲೂಕಿನ ಸರಸಂಬಾ ಗ್ರಾಮದ  ಶಂಕರ (61) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಬ್ಯಾಂಕ್‍ಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದರು. ಕುಣಿಗಲ್  ತಾಲೂಕಿನ ಬಸವಮತ್ತೀಕೆರೆಯಲ್ಲಿ ವಿಷಯ ಕುಡಿದು ಪ್ರಾಣ ಬಿಟ್ಟ ಶಿವರಾಮಯ್ಯ(65) ಅವರಿಗೆ ರು. 4 ಲಕ್ಷ ಸಾಲವಿತ್ತು. ಭದ್ರಾವತಿ ತಾಲೂಕಿನ ಭದ್ರಾ ಪುರದ ಆನೆಹಳ್ಳಿ ರವಿ (32) ನೇಣಿಗೆ ಕೊರಳೊಡ್ಡಿ ದ್ದು, ರು. 5ಲಕ್ಷಕ್ಕೂ ಮಿಗಿಲಾಗಿ ಸಾಲ ಹೊಂದಿದ್ದರು. ಬೇಲೂರು ತಾಲೂ ಕಿನ ಕಲ್ಲಿಶೆಟ್ಟಿ-ಹಳ್ಳಿಯ ಬಸವರಾಜು (44) ಸಹ ರು. 3 ಲಕ್ಷ ಸಾಲ ಮಾಡಿಕೊಂಡಿದ್ದರು.ಶ್ರೀರಂಗಪಟ್ಟಣ ತಾಲೂಕಿನ ಸಿದ್ಧಾಪುರದ ಚನ್ನೇಗೌಡ (48) ಬೆಳೆನಷ್ಟದಿಂದ ಬೇಸತ್ತಿದ್ದರು. ಜತೆಗೆ ಅವರಿಗಿದ್ದ ರು. 2 ಲಕ್ಷ ಸಾಲ ದಿಂದ ಅವರು ನೇಣಿಗೆ ಶರಣಾಗಿದ್ದಾರೆ.
ಸಿಂಧನೂರು ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಂಪಾಪತಿ ಗುಂಜಳ್ಳಿ (45) ರು.4 ಲಕ್ಷ ಸಾಲಹೊಂದಿದ್ದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com