ಚಿಕ್ಕಮಗಳೂರು: ಇಲ್ಲಿನ ಗಿರಿಪ್ರದೇಶದಲ್ಲಿ ಟ್ರಕ್ಕಿಂಗ್ ನಡೆಸುತ್ತಿದ್ದ ಹೈದರಾಬಾದ್ ಮೂಲದ ಇಬ್ಬರು ಭಾನುವಾರ ರಾತ್ರಿ ನಾಪತ್ತೆಯಾಗಿದ್ದಾರೆ.
ಸೋಮವಾರ ಸಂಜೆ 7 ಗಂಟೆವರೆಗೂ ಅವರ ಸುಳಿವು ಸಿಗಲಿಲ್ಲ. ಕೆಮ್ಮಣ್ಣಗುಂಡಿಯಿಂದ ಬಾಬಾ ಬುಡನ್ ಗಿರಿವರೆಗೆ ಟ್ರಕ್ಕಿಂಗ್ ಮಾಡಲು ಹೈದರಾಬಾದ್ ನ 10 ಮಂದಿಯ ತಂಡ ಆಗಮಿಸಿ, ಭಾನುವಾರ ಸಂಜೆ ಟ್ರಕ್ಕಿಂಗ್ ಆರಂಭಿಸಿತ್ತು.
ತಂಡದಲ್ಲಿದ್ದ ವಿಕ್ರಂಗುಪ್ತ(30), ಶಶಿಧರ್(27) ಎಂಬುವರು ಕಾಣೆಯಾಗಿದ್ದಾರೆ. ತಂಡದ ಇಬ್ಬರು ನಾಪತ್ತೆಯಾಗಿರುವ ವಿಷಯ ರಾತ್ರಿಯೇ ಪೊಲೀಸರಿಗೆ ತಿಳಿಸಿದ್ದರು.