ಜಿಲ್ಲಾ ಸುದ್ದಿ
ವರುಣಾ ನಾಲೆಗೆ ಉರುಳಿ ಬಿದ್ದ ವ್ಯಾನ್, 6 ಸಾವು
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸಮೀಪ ವರುಣಾ ನಾಲೆಗೆ ವ್ಯಾನ್ವೊಂದು ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು...
ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸಮೀಪ ವರುಣಾ ನಾಲೆಗೆ ವ್ಯಾನ್ವೊಂದು ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ತಿರುವು ಪಡೆಯುವಾಗ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ವರುಣಾ ನಾಲೆಗೆ ಬಿದ್ದಿದೆ.
ಈ ವ್ಯಾನ್ ಸ್ಪಂದನಾ ಬಾಲನ್ಯಾಯಮಂಡಳಿ ಸಂಸ್ಥೆಗೆ ಸೇರಿದ್ದು, ಬಟ್ಟೆ ಒಗೆಯಲೆಂದು ನಾಲೆಯ ಬಳಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮೃತರನ್ನು ವಾಹನದ ಚಾಲಕ ನರಸಿಂಹ ,ಸ್ನೇಹಾ,ನಿತ್ಯಾ, ಪಡಿಯಮ್ಮ, ರಾಜು, ಜೋಸೆಫ್ ಎಂದು ಗುರುತಿಸಲಾಗಿದೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಸತತ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಆರೂ ಶವಗಳನ್ನು ನಾಲೆಯಿಂದ ಹೊರತೆಗೆ ದಿದ್ದಾರೆ.